Thursday, October 23, 2008

ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ

ಚಿತ್ರ: ದೇವರಗುಡಿ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ


ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ
ಸುಖಸಂಸಾರಕೆ ಎಂದೂ ಸತಿಯೇ ಕಾರಣ

ಬಾನಿಗೆ ಎಂದೆಂದಿಗೂ ಆ ರವಿಯೇ ಭೂಷಣ
ಬಳುಕುವಾ ಲತೆಗೆ ಹೆಣ್ಣಿನಾ ಮುಡಿಗೆ ಹೂವೇ ಭೂಷಣ
ರಜನಿಗೆ ಎಂದೆಂದಿಗೂ ಆ ಶಶಿಯೇ ಭೂಷಣ
ಅರಳಿದಾ ಮನಕೆ ಹವಳದಾ ತುಟಿಗೆ ನಗುವೇ ಭೂಷಣ
ನೋವಿಗೇ ...ನಲಿವಿಗೇ....ಹೆಣ್ಣೇ ಕಾರಣ....

ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ...

ಮದುವೆಯು ಅನುಬಂಧವು ಎಂದೂ ಅಳಿಯದು
ಕೋಪದಾ ಕಿಡಿಗೆ ರೋಷದಾ ಉರಿಗೆ ಒಲವೂ ಬಾಡದೂ
ದೇಹವು ದೂರಾದರೂ ಮನಸೂ ಮರೆಯದು
ಬೆರೆತಿಹಾ ಜೀವ ವಿರಹದಾ ನೋವ ಎಂದೂ ಸಹಿಸದೂ
ಒಲವಿನಾ...ಜೀವನಾ...ಸುಖಕೇ ಸಾಧನಾ...

ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ...

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಚಿತ್ರ:ತಿರುಗುಬಾಣ
ರಚನೆ: ಚಿ.ಉದಯಶಂಕರ್
ಸಂಗೀತ: ಸತ್ಯಂ
ಹಿನ್ನಲೆ ಗಾಯನ: ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್


ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ


ಕರುನಾಡು ಸ್ವರ್ಗದ ಸೀಮೆ
ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ
ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ
ಕವಿವಾಣಿಯ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

ಚಾಮುಂಡಿ ರಕ್ಷೆಯು ನಮಗೆ
ಗೊಮ್ಮಟೇಶ ಕಾವಲು ಇಲ್ಲಿ
ಶೃoಗೇರಿ ಶಾರದೆ ಲೀಲೆ
ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಹ್ಯಾತಿಯ ವಿಶ್ವೇಶ್ವರಯ್ಯ
ಜನಿಸಿದ ಈ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

ಎಳೇಳು ಜನ್ಮವೇ ಬರಲಿ
ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ
ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ
ಮನ ಕನ್ನಡವಾಗಿರಲಿ

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

Thursday, October 16, 2008

ನೀನಾಡದಾ ಮಾತು ಮಾತಲ್ಲ

ಚಿತ್ರ: ಕಾಮನಬಿಲ್ಲು
ರಚನೆ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಹಾಗೂ ಸುಲೋಚನಾ

ನೀನಾಡದಾ ಮಾತು ಮಾತಲ್ಲ
ನೀನಾಡದಾ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ

ನಲ್ಲೆ ನೀನು ಮುಡಿಯದ ಹೂವಲ್ಲಿ ಅಂದವಿಲ್ಲ
ಚೆಲುವೆ ನೀನು ಸವಿಯದ ಹಣ್ಣಲ್ಲಿ ಸಿಹಿಯು ಇಲ್ಲ
ನಿನ್ನಂಥ ಮಾತುಗಾರನ ಇನ್ನೆಲ್ಲೂ ನಾನು ಕಾಣೆನು
ಇನಿಯ ಸೋತೆನು

ನೀನಾಡದಾ ಮಾತು...

ನಲ್ಲ ನಿನ್ನ ಕಾಣದ ದಿನವೆಲ್ಲ ಶಾಂತಿಯಿಲ್ಲ
ಚೆಲುವ ನಿನ್ನ ಸೇರದ ಇರುಳಲ್ಲಿ ಸೌಖ್ಯವಿಲ್ಲ
ಮುದ್ದಾಗಿ ಮಾತನಾಡುತ ಮಾತಲ್ಲಿ ನಿನ್ನ ಗೆಲ್ಲುತ
ಸರಸ ತುಂಬಿದೆ

ನೀನಾಡದಾ ಮಾತು ಮಾತಲ್ಲ...

Tuesday, September 30, 2008

ಮೂಕ ಹಕ್ಕಿಯು ಹಾಡುತಿದೆ

ಚಿತ್ರ:ಧರ್ಮಸೆರೆ
ರಚನೆ: ವಿಜಯನಾರಸಿಂಹ
ಸಂಗೀತ: ಉಪೇಂದ್ರ ಕುಮಾರ್
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ


ಮೂಕ ಹಕ್ಕಿಯು ಹಾಡುತಿದೆ
ಹಾಡುತಿದೆ ಹಾಡುತಿದೆ ಹಾಡುತಿದೆ
ಭಾಷೆಗೂ ನಿಲುಕದ ಭಾವಗೀತೆಯ
ಸಾರಿ ಸಾರಿ ಹಾಡುತಿದೆ

ಸಖನೊಡಗೂಡೀ ಸುಖವನು ಕಾಣೋ
ಸುಂದರ ಸ್ವಪ್ನವ ಕಂಡು
ಹಿಗ್ಗಿ ಹಿಗ್ಗುತಾ ಹಾರುತಲಿರಲು
ಹಕ್ಕಿಯ ರೆಕ್ಕೆ ಮುರಿದಿತ್ತು..

ಮೂಕ ಹಕ್ಕಿಯು ಹಾಡುತಿದೆ...

ತಂಪಿನ ನೆರಳೆ ಬೆಂಕಿಯ ಕಾರಿತು
ಹಕ್ಕಿಯು ವಿಲವಿಲ ಒದ್ದಾಡಿತು
ನಾನಾ ಬಗೆಯ ವಿಷ ಬಾಣಗಳು
ಹಕ್ಕಿಯ ಒಡಲಿಗೆ ನಾಟಿತ್ತು
ವೇದನೆಯಲ್ಲಿ ತತ್ತರಿಸುತ್ತಾ
ತವರಿಗೆ ಹಕ್ಕಿ ಮರಳಿತ್ತು
ತನ್ನ ತವರಿಗೆ ಹಕ್ಕಿ ಮರಳಿತು
ಮರಳಿತು ಮರಳಿತು ಮರಳಿತು

ಒಂದೆಡೆ ತಾಯಾಗೋ ಹರುಷದ ಹಸಿರು
ಇನ್ನೊಂದೆಡೆ ಚೀತ್ಕಾರದ ಬಿಸಿ ಉಸಿರು ಉಸಿರು
ಒಂದೆಡೆ ತಾಯಾಗೋ ಹರುಷದ ಹಸಿರು
ಇನ್ನೊಂದೆಡೆ ಚೀತ್ಕಾರದ ಬಿಸಿ ಉಸಿರು ಉಸಿರು
ಸಂಕಟದಾ ಸುಳಿದಾಳಿಗೆ
ಹಕ್ಕಿ ಸುತ್ತಿ ಸುತ್ತಿತು
ಸುತ್ತಿ ಸುತ್ತಿ ಸುತ್ತಿತು

ಮೂಕ ಹಕ್ಕಿಯು ಹಾಡುತಿದೆ...

Sunday, September 7, 2008

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ

ರಚನೆ: ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ
ಸ೦ಗೀತ: ಮೈಸೂರು ಅನಂತಸ್ವಾಮಿ
ಹಿನ್ನಲೆ ಗಾಯನ: ಪಲ್ಲವಿ ಅರುಣ್



ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ
ನಾ ತಾಳಲಾರೆ ಈ ವಿರಹ ಕೃಷ್ಣ
ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ

ಕಮಲವಿಲ್ಲದ ಕೆರೆ ನನ್ನ ಬಾಳು
ಚ೦ದ್ರ ಇಲ್ಲದ ರಾತ್ರಿ ಬೀಳು
ಕಮಲವಿಲ್ಲದ ಕೆರೆ ನನ್ನ ಬಾಳು
ಚ೦ದ್ರನಿಲ್ಲದ ರಾತ್ರಿ ಬೀಳು
ನೀ ಸಿಗದೆ ಉರಿ ಉರಿ ಕಳೆದೆ ಇರುಳ
ಮಾತಿಲ್ಲ ಬಿಗಿದಿದೆ ದುಃಖ ಕೊರಳ

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ...

ಅನ್ನ ಸೇರದು ನಿದ್ದೆ ಬ೦ದುದೆ೦ದು
ಕುದಿವೆ ಒ೦ದೇ ಸಮ ಕೃಷ್ಣಾ ಎ೦ದು
ಅನ್ನ ಸೇರದು ನಿದ್ದೆ ಬ೦ದುದೆ೦ದು
ಕುದಿವೆ ಒ೦ದೇ ಸಮ ಕೃಷ್ಣಾ ಎ೦ದು
ಯಾರು ಅರಿವರು ಹೇಳು ನನ್ನ ನೋವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ...

ಒಳಗಿರುವ ಗಿರಿಧರನೆ ಹೊರಗೆ ಬಾರೋ
ಕಣ್ಣೆದುರು ನಿ೦ತು ಆ ರೂಪ ತೋರೋ
ಒಳಗಿರುವ ಗಿರಿಧರನೆ ಹೊರಗೆ ಬಾರೋ
ಕಣ್ಣೆದುರು ನಿ೦ತು ಆ ರೂಪ ತೋರೋ
ಜನುಮ ಜನುಮದಾ ರಾಗ ನನ್ನ ಪ್ರೀತಿ
ಕೃಷ್ಣಾ... ಕೃಷ್ಣಾ... ಕೃಷ್ಣಾ... ಕೃಷ್ಣಾ...
ಜನುಮ ಜನುಮದಾ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೆ ಅದರ ರೀತಿ

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ...

Monday, August 25, 2008

ನೀ ಹೀಂಗ ನೋಡಬ್ಯಾಡ ನನ್ನ

ರಚನೆ : ಡಾ.ದ.ರಾ.ಬೇಂದ್ರೆ
ಸಂಗೀತ: ಎಂ.ರಂಗರಾವ್
ಹಿನ್ನಲೆ ಗಾಯನ: ರಾಜಕುಮಾರ್ ಭಾರತಿ


ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ

ದಾರೀಲಿ ನೆನೆದ ಕೈ ಹಿಡಿದೆ ನೀನು ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲಿನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ ನಾನು ದೇವರಂತ ತಿಳಿದಿಯೇನ ನೀ ನನ್ನ

ನೀ ಹೀಂಗ ನೋಡಬ್ಯಾಡ ನನ್ನ...

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಾoಟಿಯಾ ಹಣ್ಣು
ಹೊಳೆ ಹೊಳೆವ ಹಾಂಗಿರುವ ಕಣ್ಣಿರುವ ಹೆಣ್ಣ ಹೇಳು ನಿನ್ನವೇನ ಈ ಕಣ್ಣು
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ

ನೀ ಹೀಂಗ ನೋಡಬ್ಯಾಡ ನನ್ನ...

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡ ನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡದ್ಹಾಂಗೆ ಗಾಳಿಯ ನೆವಕ
ಅತ್ತಾರೆ ಅತ್ತುಬಿಡು ಹೊನಲು ಬರಲಿ ನಕ್ಯಾಕೆ ಮರಸತೀ ದು:ಖ
ಎವೆಬಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿಕಚ್ಚಿ ಹಿಡಿಯದಿರು ಬಿಕ್ಕ

ನೀ ಹೀಂಗ ನೋಡಬ್ಯಾಡ ನನ್ನ...

Thursday, August 7, 2008

ಶ್ರಾವಣ ಮಾಸ ಬಂದಾಗ ಆನಂದ ತಂದಾಗ

ಚಿತ್ರ: ಶ್ರಾವಣ ಬಂತು
ರಚನೆ: ಚಿ.ಉದಯಶಂಕರ್
ಸಂಗೀತ: ಎಂ.ರಂಗರಾವ್
ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್ ಮತ್ತು ವಾಣಿ ಜಯರಾಮ್


ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ

ನೀ ನನ್ನ ಜೊತೆಯಾಗಿ ಇರುವಾಗ ಹಿತವಾಗಿ
ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ
ಮಾತೆಲ್ಲ ಹಾಡಾಗಿ ಆ ಹಾಡು ಇಂಪಾಗಿ
ಯುಗವೊಂದು ದಿನವಾಗಿ ಕ್ಷಣವಾಗಿ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ

ಶ್ರಾವಣ ಮಾಸ ಬಂದಾಗ ಆನಂದ ತಂದಾಗ...

ಮುಗಿಲೆಲ್ಲ ಕಪ್ಪಾಗಿ ಮಿಂಚಿಂದ ಬೆಳಕಾಗಿ
ಗುಡುಗಿಂದ ಸದ್ದಾಗಿ ಮಳೆಬಂದು ತಂಪಾಗಿ
ಸಂತೋಷ ಹೆಚ್ಚಾಗಿ ನವಿಲೊಂದು ಹುಚ್ಚಾಗಿ
ಕುಣಿದಾಗ ಸೊಗಸಾಗಿ ನಮಗಾಗ ಚಳಿಯಾಗಿ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ

ಶ್ರಾವಣ ಮಾಸ ಬಂದಾಗ ಆನಂದ ತಂದಾಗ...

Sunday, August 3, 2008

ಮನಸ ಹೇಳ ಬಯಸಿದೆ... ನೂರೊಂದು

ಚಿತ್ರ: ಬೀಗರ ಪಂದ್ಯ
ರಚನೆ: ಆರ್.ಎನ್. ಜಯಗೋಪಾಲ್
ಸಂಗೀತ: ರಮೇಶ್ ನಾಯ್ಡು
ಹಿನ್ನಲೆ ಗಾಯನ: ಪಿ.ಸುಶೀಲ


ಮನಸ ಹೇಳ ಬಯಸಿದೆ... ನೂರೊಂದು
ತುಟಿಯ ಮೇಲೆ ಬಾರದಿದೆ... ಮಾತೊಂದು
ನೆನಪು ನೂರು ಎದೆಯಲಿ... ಅಗಲಿಕೆಯ ನೋವಲಿ
ವಿದಾಯ ಗೆಳೆಯನೇ... ವಿದಾಯ ಗೆಳತಿಯೇ
ವಿದಾಯ ಹೇಳ ಬಂದಿರುವೇ... ನಾನಿಂದು

ಹಗಲು ರಾತ್ರಿ... ಹಕ್ಕಿಯ ಹಾಗೇ... ಹಾರಿ ಮೆರೆದೆವು
ನಗು ಎನ್ನುವ ಅಲೆಯ ಮೇಲೆ ತೇಲಿ ನಲಿದೆವು
ಹೃದಯಗಳಾ... ಬೆಸುಗೆಯಾಗಿ
ಸ್ನೇಹ ಬಂಧ ಅಮರವಾಗಿ
ನಾಳೆ ಎನ್ನುವ ಚಿಂತೆ ಮರೆತು ಹಾಡಿ ಕುಣಿದೆವು
ಆ ಕಾಲ ಕಳೆದಿದೆ... ದೂರಾಗೋ ಸಮಯದೇ
ವಿದಾಯ ಹೇಳ ಬಂದಿರುವೇ... ನಾನಿಂದು

ಮನಸ ಹೇಳ ಬಯಸಿದೆ... ನೂರೊಂದು

ನೀನು ಬೇರೆ... ನಾನು ಬೇರೆ... ಹೇಗೋ ಬೆರೆತೆವು
ನಮ್ಮ ನಮ್ಮ ಒಪ್ಪು ತಪ್ಪು... ಎಲ್ಲಾ ಅರಿತೆವು
ಈ ದಿನವ ಮರೆಯಬೇಡ
ನಮ್ಮ ಸ್ನೇಹ ತೊರೆಯಬೇಡ
ದಾರಿ ಬೇರೆ ಆದರೇನು... ಪ್ರೀತಿ ಉಳಿಯಲಿ
ನಾನೆಲ್ಲೆ ಇದ್ದರೂ... ನೀ ಹೇಗೆ ಇದ್ದರೂ
ನೀ ನಾಳೆ ಕೇಳಬೇಡ.. ನನ್ನ ಯಾರೆಂದು

Thursday, July 24, 2008

ಅಮ್ಮ…ನಿನ್ನ ಎದೆಯಾಳದಲ್ಲಿ

ರಚನೆ: ಬಿ.ಆರ್.ಲಕ್ಷ್ಮಣರಾವ್

ಅಮ್ಮ…ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ಈ ಕರುಳ ಬಳ್ಳಿ
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ
ಓ ಅಗಾಧ ಗಗನ !

ಅಮ್ಮ…ನಿನ್ನ ಎದೆಯಾಳದಲ್ಲಿ...

ಮೇಲೆ ಹಾರಿ ನಿನ್ನ ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು
ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ !

ಅಮ್ಮ…ನಿನ್ನ ಎದೆಯಾಳದಲ್ಲಿ...

Saturday, July 19, 2008

ಒಮ್ಮೆ ನಿನ್ನನ್ನೂ ಕಣ್ತುಂಬಾ ಕಾಣುವಾಸೆ ಎಲ್ಲಿರುವೇ

ಚಿತ್ರ:ಗಾಳಿ ಮಾತು
ರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಜಾನಕಿ




ಒಮ್ಮೆ ನಿನ್ನನ್ನೂ ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇ..

ಅರಳಿರುವ ಹೂವಿನಲ್ಲೀ ನಿನ್ನ ನೋಟವಾ
ಹರಿಯುತಿಹ ನೀರಿನಲ್ಲೀ ನಿನ್ನ ಓಟವಾ
ಇಂಪಾದ ಗಾನದಲ್ಲೀ ನಿನ್ನ ಮೊಗದ ಭಾವವಾ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ
ನವಿಲಾಡೊ ನಾಟ್ಯದಲ್ಲೀ ಚಂದವಾ
ತಂಪಾದ ಗಾಳಿಯಲ್ಲೀ ನೀನಾಡೋ ಆಟವಾ
ದಿನವೆಲ್ಲಾ ನಾ ಕಂಡೇ ನಾ ಕಂಡೂ ಬೆರೆಗಾದೆ...

ಒಮ್ಮೆ ನಿನ್ನನ್ನೂ..

ಮಿನುಗುತಿಹ ತಾರೆಯೆಲ್ಲಾ ನಿನ್ನ ಕಂಗಳೋ
ನಗುತಿರಲು ಭೂಮಿಗೆಲ್ಲಾ ಬೆಳದಿಂಗಳೋ
ಆ ಬೆಳ್ಳೀ ಮೋಡವೆಲ್ಲಾ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದಾ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ
ನಿನ್ನಂತೇ ಯಾರಿಲ್ಲಾ ನಿನ್ನಲ್ಲೇ ಮನಸೆಲ್ಲಾ...

ಒಮ್ಮೆ ನಿನ್ನನ್ನೂ..

Wednesday, July 9, 2008

ಮುಚ್ಚುಮರೆ ಇಲ್ಲದೆಯೇ

ರಚನೆ: ಕುವೆಂಪು
ಸಂಗೀತ: ಮೈಸೂರು ಅನಂತಸ್ವಾಮಿ
ಹಿನ್ನಲೆ ಗಾಯನ: ಪುಷ್ಪ ಜಗದೀಶ್


ಮುಚ್ಚುಮರೆ ಇಲ್ಲದೆಯೇ
ನಿನ್ನ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೇ, ಅಂತರಾತ್ಮ

ಪಾಪವಿದೆ ಪುಣ್ಯವಿದೆ
ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೇ, ಅಂತರಾತ್ಮ

ಮುಚ್ಚುಮರೆ ಇಲ್ಲದೆಯೇ...

ರವಿಗೆ ಕಾಂತಿಯನೀವೆ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೆ
ನರಕ ತಾನುಳಿಯುವುದೇ ನರಕವಾಗಿ

ಮುಚ್ಚುಮರೆ ಇಲ್ಲದೆಯೇ...

ಸಾಂತರೀತಿಯೊಳೆಮ್ಮಿ ಕದಡಿರುವುದೆನ್ನಾತ್ಮ
ನಾಂತರೀತಿಯು ಅದೆಂತೋ, ಓ ಅನಂತಾ..
ನನ್ನ ರೀತಿಯ ಕುರುಡಿಂದೆನ್ನ ರಕ್ಷಿಸೈ
ನಿನ್ನ ನೀತಿಯ ಬೆಳಗಿನ ಅನಂತಕೊಯ್

ಮುಚ್ಚುಮರೆ ಇಲ್ಲದೆಯೇ...

Tuesday, July 8, 2008

ಸವಿನೆನಪುಗಳು ಬೇಕು ಸವಿಯಲೀ ಬದುಕು

ಚಿತ್ರ: ಅಪರಿಚಿತ
ಸಂಗೀತ: ಎಲ್. ವೈದ್ಯನಾಥನ್
ಹಿನ್ನಲೆ ಗಾಯನ: ಎಸ್. ಜಾನಕಿ



ಸವಿನೆನಪುಗಳು ಬೇಕು ಸವಿಯಲೀ ಬದುಕು
ಕಹಿನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ

ಸವಿನೆನಪುಗಳು ಬೇಕು ಸವಿಯಲೀ ಬದುಕು...

ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನ ಎದೆಗೊರಗಿ ಆಸರೆಯ ಬೇಡಿ
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ
ಇನಿಯನ ಎದೆ ಬಡಿತ ಗುಂಡಿನ ದನಿಗಿರಿದು
ಮಾಸುತಿದೆ ಕನಸು

ಸವಿನೆನಪುಗಳು ಬೇಕು ಸವಿಯಲೀ ಬದುಕು...

ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ ನಾ ಬಂದಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸುಕಾಗಿ
ಅರಳುವ ಹೂವೊಂದು ಕಮರುವ ಭಯದಲೀ
ಸಾಗುತಿದೆ ಬದುಕು

ಸವಿನೆನಪುಗಳು ಬೇಕು ಸವಿಯಲೀ ಬದುಕು...

Saturday, July 5, 2008

ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ

ಚಿತ್ರ: ಸೈಕೊ
ಸಂಗೀತ: ರಘು ದೀಕ್ಷಿತ್
ರಚನೆ: ದೇವದತ್ತ, ರಘು ದೀಕ್ಷಿತ್
ಹಿನ್ನಲೆ ಗಾಯನ: ರಘು ದೀಕ್ಷಿತ್


ಹೇ! ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ
ಎನ್ನ ಕರುಣದಿ ಕಾಯೊ ಮಹದೇಶ್ವರಾ
ಹೇ ಶಂಕರ ಪ್ರೇಮಾಂಕುರ ಆದನಂತರ ನೆಮ್ಮದಿ ದೂರ
ಯಾಕೀತರ ಹೇಳು ಪ್ರೇಮಾ ಅಂಬೋದೆ ಹುನ್ನಾರ
ಇದರಿಂದ ಶಾಂತಿ ಸಂಹಾರ

ಒಮ್ಮೆ ಚಂದದಿ ನೋಡೊ ಮಹದೇಶ್ವರಾ...

ಈ ಪ್ರೇಮವು ದೇವರ ಹಾಗೆ
ನನ್ನೋಳ ಮನಸು ಪರಿಶುದ್ಧ ಗಂಗೆ
ಹುಸಿ ಮಾದದೆ ನಾನಿಟ್ಟ ನಂಬಿಕೆ
ಹುಸಿರಾಗುತ್ತಾಳೆ ಈ ನನ್ನ ಜೀವಕೆ
ಈ ಪ್ರೇಮದಿಂದ ವ್ಯಸನವು ಥರ ಥರ
ಬದುಕಿನ ಗತಿ ಬದಲಿಸೋ ಗಡಿಯಾರ

ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ...

ಓ ಪ್ರೇಮವೇ ನಿನಗೆ ಪ್ರಣಾಮ
ನಿನ್ನಿಂದಲೆ ಈ ಲೋಕ ಕ್ಷೇಮ
ಓಂಕಾರ ರೂಪಿ ಈ ನನ್ನ ಪ್ರೇಮ
ಸಾವಿಲ್ಲದ ಚೈತನ್ಯ ಧಾಮ
ಈ ಮುಗ್ಧ ಹೃದಯದಿ ಚಿಗುರುದೆ ಸಡಗರ
ಗುನುಗುನಿಸಲಿ ಸುಮಧುರ ಝೇಂಕಾರ

ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ
ಇವನ ಕರುಣದಿ ಕಾಯೊ ಮಹದೇಶ್ವರಾ
ಶಂಭೊ ಯಾರಿವನ್ಯಾರೊ ಮಹದೇಶ್ವರಾ
ಪ್ರೇಮಾ ದೇವರು ಎಂದ ಪ್ರೇಮೇಶ್ವರಾ
ಬೇರೇನನು ನಾ ಬೇಡೆನು ಈ ಪ್ರೇಮವ ಕಾಪಾಡು ನೀನು
ಈ ಪ್ರೇಮಿಯಾ ಆಸೆ ಈಡೆರಿಸೊ ಹರ
ಇನ್ನಾಗಲಿ ಬಾಳು ಬಂಗಾರ.

ನಿನ್ನಾ ಪೂಜೆಗೆ ಬಂದೆ ಮಹದೇಶ್ವರಾ...

Wednesday, July 2, 2008

ನನ್ನ ಹಾಡು ನನ್ನದು ನನ್ನ ರಾಗ ನನ್ನದು

ಚಿತ್ರ: ಸುಪ್ರಭಾತ
ರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ




ನನ್ನ ಹಾಡು ನನ್ನದು ನನ್ನ ರಾಗ ನನ್ನದು
ನನ್ನ ತಾಳ ನನ್ನದು ನನ್ನ ಆಸೆ ನನ್ನದು

ಎಲ್ಲೆಲ್ಲಿಯು ಎಂದೆಂದಿಗು ಎಲ್ಲೆಲ್ಲಿಯು ಎಂದೆಂದಿಗು
ನನ್ನಂತೆ ನಾನು ಇರುವೆನು ನುಡಿವೆನು ನಡೆವೆನು ದುಡಿವೆನು
ಈ ಬಾಳಲಿ

ನೋಡು ನೀಲಿ ಬಾನಿಗೆ ಮೋಡ ಅಂದ ತಂದಿದೆ
ಹಕ್ಕಿ ಹಾಡಿ ಹಾರಾಡಿದೆ
ಹಾಯಾಗಿ ಆನಂದದೆ
ತಂಪು ಗಾಳಿ ಬೀಸಿದೆ ನದಿಯ ನೀರು ಓಡಿದೆ
ಹಸಿರು ಮೆತ್ತೆಯ ಹಾಸಿದೆ
ಲತೆಯಲ್ಲಿ ಹೂ ನಗುತಿದೆ
ಜಗದ ಸೊಬಗು ನನಗೆ ತಾನೆ

ನನ್ನ ಹಾಡು ನನ್ನದು ನನ್ನ ರಾಗ ನನ್ನದು...

ನೂರು ಜನರು ಬಂದರು ನೂರು ಜನರು ಹೋದರು
ನನಗೆ ನಾನೆ ಸಂಗಾತಿಯು
ನಾನೆಂದು ಸುಖ ಜೀವಿಯು
ಉರಿವ ಬಿಸಿಲೆ ಬಂದರು ಗುಡುಗು ಮಳೆಯೆ ಸುರಿದರು
ನನಗೆ ಎಲ್ಲ ಸಂತೋಷವೆ
ದಿನಕೊಂದು ಹೊಸ ನೋಟವೆ
ಹಗಲು ಇರುಳು ಸೊಗಸು ತಾನೆ

ನನ್ನ ಹಾಡು ನನ್ನದು ನನ್ನ ರಾಗ ನನ್ನದು...

Tuesday, July 1, 2008

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ

ಚಿತ್ರ : ಬೆಟ್ಟದ ಹೂವು
ರಚನೆ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಡಾ.ಪಿ.ಬಿ.ಶ್ರೀನಿವಾಸ್, ಮಾ.ಲೋಹಿತ್ ಮತ್ತು ಸಂಗಡಿಗರು



ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ

ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು
ಶಾಂತಿಯಾ ಉಳಿಸು
ಶಾಂತಿಯಾ ಉಳಿಸು

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ನಮ್ಮ ಕೋರಿಕೆ ಆಲಿಸಮ್ಮ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು
ಆಸೆ ಪೂರೈಸೂ
ಆಸೆ ಪೂರೈಸೂ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ಕೊಳನನೂದಿ ಮೊಹಿಸುವುದನು ಕಲಿಸು ಎನಗೆ ಚೆನ್ನ

ಕೊಳನನೂದಿ ಮೊಹಿಸುವುದನು ಕಲಿಸು ಎನಗೆ ಚೆನ್ನ
ತಳಮಳಿಪುದು ಎನ್ನ ಎದೆಯು ಕೊಳಲಗಾನದಿಂದ ……. ಕೊಳಲಗಾನದಿಂದ

ನಲಿಯುತಿಹುದು ಉದಯಗಗನ ಅರುಣರಾಗದಿಂದ
ಕೊಳದಲೆಗಳು ಕುಣಿಯುತಿಹವು ಭಾವದೊಲುಮೆಯಿಂದ

ತನಿತಚೂತದಡಿಯಮೊದಲ ನುಡಿಯಕಲಿಸು ಚೆನ್ನ
ಕೊಳಲಕಲಿಸು ಬೇಗ ಎನಗೆ ಮೊಹಿಸುವೆನು ನಿನ್ನಾ …. ಮೊಹಿಸುವೇನು ನಿನ್ನ

ಇದನ್ನು ಕಳಿಸಿದ ಸೌಮ್ಯ ಅವರಿಗೆ ಧನ್ಯವಾದಗಳು. ಇದರ ಸಾಹಿತ್ಯ, ಸಂಗೀತ, ಹಿನ್ನಲೆಗಾಯಕರ ಮಾಹಿತಿಯಿದ್ದರೆ ಕಳಿಸಿಕೊಡಿ

ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಸಾಹಿತ್ಯ: ಹೆಚ್.ಎಸ್.ವೆಂಕಟೇಶ ಮೂರ್ತಿ
ಹಿನ್ನಲೆ ಗಾಯನ: ಬಿ.ಆರ್.ಛಾಯ


ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಮಾತು ಮಾತಿಗೇಕೋ ನಗು ಮರುಗಳಿಗೆ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಸೆರಗು ತೀಡಿದಷ್ಟುಹೊತ್ತು ಹಟಮಾಡುವ ಕೂದಲು
ಸೆರಗು ತೀಡಿದಷ್ಟುಹೊತ್ತು ಹಟಮಾಡುವ ಕೂದಲು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ನಗುತ ಅವಳ ಅಣುಕಿಸುತಿದೆ ಗಲ್ಲದ ಕರಿ ಮಚ್ಚೆ
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಬರಿ ಹಸಿರು ಬರಿ ಹೂವು ಎದೆಯೊಳೆಷ್ಟು ಹೆಸರು
ಯಾವ ಮದುವೆ ದಿಬ್ಬಣವೋ ಸುಮ್ಮನೆ ನಿಟ್ಟುಸಿರು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು

ಇದನ್ನು ಕಳಿಸಿದ ಸೌಮ್ಯ ಅವರಿಗೆ ಧನ್ಯವಾದಗಳು. ಇದರ ಸಾಹಿತ್ಯ, ಸಂಗೀತ, ಹಿನ್ನಲೆಗಾಯಕರ ಮಾಹಿತಿಯಿದ್ದರೆ ಕಳಿಸಿಕೊಡಿ

Sunday, June 29, 2008

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ

ಸಾಹಿತ್ಯ: ಎಂ.ಎನ್.ವ್ಯಾಸರಾವ್
ಸಂಗೀತ: ಸಿ.ಅಶ್ವತ್ಥ್
ಹಿನ್ನಲೆ ಗಾಯನ: ರತ್ನಮಾಲಾ ಪ್ರಕಾಶ್

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ಸೂಜುಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರೆ ಕನಸುಗಳು ಕಾಡುತಿಹುದು

ಎದೆಗೆ ತಾಪದ ಉಸಿರು ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು
ಬಳಿಗೆ ಬಾರದೆ ನಿಂತೆ ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ....

ನೀನೊಂದು ದಡದಲ್ಲಿ ನಾನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಡವು
ಯಾವ ದೋಣಿಯು ತೇಲಿ ಎಂದು ಬರುವಿದೊ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ...

Monday, June 23, 2008

ಬಿಸಿಲಾದರೇನು ಮಳೆಯಾದರೇನು...

ಚಿತ್ರ: ಬೆಂಕಿಯ ಬಲೆ
ರಚನೆ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ



ಬಿಸಿಲಾದರೇನು ಮಳೆಯಾದರೇನು
ಎಂದೂ ನಾನಿಲ್ಲವೇನು
ನೀ ನನ್ನ ಜೀವಾ ಎಂದಿಗೂ

ಹೂವು ಹಾವಾದರೇನು ಹಾಲು ವಿಷವಾದರೇನು
ಹೂವು ಹಾವಾದರೇನು ಹಾಲು ವಿಷವಾದರೇನು
ಈ ನಿನ್ನ ನೋಟ ಬೆರೆತಾಗ ಮುಳ್ಳು
ಹೂವಾಗಿ ಅರಳದೇನು
ಭುವಿಯೇ ಬಾಯ್ಬಿಟ್ಟರೇನು ಸಿಡಿಲೆ ಎದುರಾದರೇನು
ನನ್ನಾಣೆ ನಲ್ಲೆ ನಾ ನಿನ್ನ ಬಿಡೆನು
ಪ್ರಾಣಕ್ಕೆ ಪ್ರಾಣ ಕೊಡುವೆ
ಕಂಬನಿ ಮಿಡಿಯದೇ ಇನ್ನು ನಗಲಾರೆಯೇನು

ಬಿಸಿಲಾದರೇನು ಮಳೆಯಾದರೇನು...

ಸೆಳೆವ ಸುಳಿಯಾದರೇನು ಬೆಂಕಿಯ ಬಲೆಯಾದರೇನು
ಸೆಳೆವ ಸುಳಿಯಾದರೇನು ಬೆಂಕಿಯ ಬಲೆಯಾದರೇನು
ಈ ಬಾಳು ಇನ್ನು ಹೋರಾಟ ತಾನೇ
ಬಿಡು ಇನ್ನು ಚಿಂತೆಯನ್ನು
ಯಾರೇನು ಅಂದರೇನು ಊರೇ ಎದುರಾದರೇನು
ಕೊನೆತನಕ ನಾನು ಹೋರಾಡಿ ಗೆಲುವೆ
ನಿನ್ನನ್ನು ನಾನು ಬಿಡೆನು
ಕೊರಗದೆ ನಡುಗದೆ ನಲ್ಲೆ ನಗಲಾರೆಯೇನು

ಬಿಸಿಲಾದರೇನು ಮಳೆಯಾದರೇನು...

ಈ ಭಾವಗೀತೆ ನಿನಗಾಗಿ ಹಾಡಿದೆ

ಚಿತ್ರ: ಒಂದೇ ಗುರಿ
ರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ

ಈ ಭಾವಗೀತೆ ನಿನಗಾಗಿ ಹಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ

ಬಳ್ಳಿಯಲಿ ಹೂವು ತುಂಬಿ ಮರಗಳಲಿ ಜೀವ ತುಂಬಿ
ಎಲ್ಲೆಲ್ಲಿ ನೊಡಿದರಲ್ಲಿ ಹೊಸ ಹಸಿರು ತುಂಬಿದೆ
ಹಾಡುತಿರೆ ದುಂಬಿಗಳೆಲ್ಲ ಹಾರುತಿರೆ ಹಕ್ಕಿಗಳೆಲ್ಲಾ
ತೋಳಿoದ ನನ್ನನು ಬಳಸಿ ನೀ ಸನಿಹ ನಿಂತಿರೇ
ನಿನ ಅಂದ ಕಂಡು ಸಂತೋಷಗೊಂಡು ಹೊಸ ಭಾವ ಮೂಡಲು

ಈ ಭಾವಗೀತೆ ನಿನಗಾಗಿ ...

ಕಣ್ಣಿನಲಿ ರೂಪ ತುಂಬಿ ಮನಸಿನಲಿ ಪ್ರೇಮ ತುಂಬಿ
ನನ್ನೆದೆಯ ವೀಣೆಯ ಮೀಟಿ ಹೊಸ ನಾದ ತುಂಬಿದೆ
ಆಸೆಗಳ ಕಣ್ಣು ತುಂಬಿ ಮೋಹವನು ತುಂಬಿ ತುಂಬಿ
ನೂರಾರು ಕನಸುಗಳನ್ನು ಬಾಳಲ್ಲಿ ತುಂಬಿದೆ
ಹೀಗೇಕೆ ನೀ ಮೌನವಾದೆ ಕಾರಣ ಹೇಳದೇ

ಈ ಭಾವಗೀತೆ ನಿನಗಾಗಿ...