Sunday, October 3, 2010

ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ

ಚಿತ್ರ: ಅನುಭವ
ಸಾಹಿತ್ಯ: ವಿ.ಮನೋಹರ್
ಸಂಗೀತ: ಎಲ್. ವೈದ್ಯನಾಥನ್
ಗಾಯನ: ವಾಣಿ ಜಯರಾಮ್




ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ
ನೀ ಅರಿಯದೆ ಹೋದೆ ಪ್ರೇಮದ ನಾ ಸಂದೇಶವ ತಂದಾಗ
ನೀ ಶೃತಿಯ ಮಿಡಿದಾಗ ಹಾಡಿದೆ ನಾ ಹುಸಿ ರಾಗ
ತೋರಿದೆ ನೀ ಅನುರಾಗ ಗಮನಿಸದೆ ತೆರಳಿದೆ ನಾ

ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ...

ನಲ್ಲ ಬಳಿಸಾರಿ ಮೆಲ್ಲ ಬಿಗಿದಾಗ ತಳ್ಳಿ ದೂರಾದೆ ಅರಿಯದೆ ನಾ
ಮದನ ನೀನಾಗಿ ಮುದದಿ ತೆರೆದಾಗ ರತಿಯ ಸವಿಲೀಲೆ ಮರೆತೆನು ನಾ
ಹೂವಿನ ಹಾಸಿಗೆ ನೀ ಹಾಸಿ ಮೋಗದಿ ನನ್ನನು ಕರೆದಾಗ
ಮಾಡಿದೆ ನಾನು ಪರಿಹಾಸ ನೀಡದೆ ನಿನಗೆ ಉಲ್ಲಾಸ
ಸವಿ ಇರುಳ ಹೊಂಗನಸ ಮುರಿದೆನು ನಾ

ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ...

ಮೇಘ್ಹ ಸರಿದಾಗ ತಾರೆ ಹೊಳೆದಾಗ ಚಂದ್ರ ಮರೆಯಾದ ನನ್ನ ತೊರೆದ
ಯಾರ ಬಳಿನಾನು ನೋವ ನುಡಿದೇನು ಇನಿಯ ಮರೆತಾಗ ಸಹಿಸೆನು ನಾ
ಬಾಳೆನು ಚಿಂತೆಯ ಪಾಲಾಇ ದುಂಬಿಯ ಕಾಣದ ಹೂವಾಗಿ
ತಾಳೆನು ನಾನು ಏಕಾಂತ ಬರುವೆನೆಇನ್ನ ಓ ಕಾಂತ
ಕೊರಗುತಿಹೆ ಮರುಗುತಿಗೆ ವಿರಹದಿ ನಾ

ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ...

Sunday, September 26, 2010

ಬಾನಲ್ಲಿ ನಿನ್ನಿಂದ ಸೂರ್ಯೋದಯ

ಚಿತ್ರ: ನೀನು ನಕ್ಕರೆ ಹಾಲು ಸಕ್ಕರೆ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ



ಶರಣೂ... ಶರಣೆನುವೆ...ಶರಣೆನುವೆ...
ಓ... ಪ್ರಭುವೇ... ಶರಣೆನುವೆ...

ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ
ಬಾನಲ್ಲಿ ನಿನ್ನಿಂದ ಚಂದ್ರೋದಯ
ಆನಂದ ನಿನ್ನಿಂದ ಕರುಣಾಮಯ
ಮೋಡ ಮಳೆಯಾಗಲು ನೀರು ಭುವಿ ಸೇರಲು
ಭೂಮಿ ಹಸಿರಾಗಲು ಲೋಕ ಗೆಲುವಾಗಲು
ಓಂ ಓಂ ಓಂ ಓಂ ಓಂ ಓಂ ಓಂ
ನೀ ಕಾರಣನು ದೇವ

ಬಾನಲ್ಲಿ ನಿನ್ನಿಂದ ಸೂರ್ಯೋದಯ...

ಈ ಲತೆ ನೀನೆ... ಆssss
ಈ ಲತೆ ನೀನೆ ಈ ಸುಮ ನೀನೆ
ಈ ಸುಮತಂದ ಗಂಧವೂ ನೀನೆ
ಕಲ್ಲಲ್ಲಿ ಮುಳ್ಳಲ್ಲಿ ಮಣ್ಣಲ್ಲಿಯೂ
ಗಿರಿಯಲ್ಲಿ ಗುಹೆಯಲ್ಲಿ ವನದಲ್ಲಿಯೂ
ಬಾನಾಡಿ ಕೊರಳಲ್ಲಿ ಇಂಪಾಗಿಯೂ
ತಂಗಾಳಿ ಸುಳಿಯಲ್ಲಿ ತಂಪಾಗಿಯೂ
ತಂಗಾಳಿ ಸುಳಿಯಲ್ಲಿ ತಂಪಾಗಿಯೂ
ಹಣ್ಣ ರುಚಿಯಲ್ಲಿಯೂ, ಜೇನ ಸಿಹಿಯಲ್ಲಿಯೂ, ಹಾಲ ಬೆಳಕಲ್ಲಿಯೂ, ರಾತ್ರಿ ಇರುಳಲ್ಲಿಯೂ
ಓಂ ಓಂ ಓಂ ಓಂ ಓಂ ಓಂ
ನೀನೇ ಇರುವೆ ದೇವ ಆಸ್ಸ್ಸ್

ಬಾನಲ್ಲಿ ನಿನ್ನಿಂದ ಸೂರ್ಯೋದಯ...

ಈಶ್ವರ ನೀನೇ...ಆsss
ಈಶ್ವರ ನೀನೇ ಶಾಶ್ವತ ನೀನೇ
ಎಲ್ಲವೂ ನೀನೇ ಎಲ್ಲೆಡೆ ನೀನೇ
ಸಂತೋಷ ಕೊಡುವಂತ ನಗೆಯಲ್ಲಿಯೂ
ಕಂದಂಗೆ ತಾಯ್ಕೊಡುವ ಮುತ್ತಲ್ಲಿಯೂ
ಹಿತವಾದ ಸಂಗೀತ ಸ್ವರದಲ್ಲಯೂ
ಕವಿಯಾಡೊ ಸವಿಯಾದ ಮಾತಲ್ಲಿಯೂ
ಕವಿಯಾಡೊ ಸವಿಯಾದ ಮಾತಲ್ಲಿಯೂ
ಬೆಂಕಿ ಕಿಡಿಯಲ್ಲಿಯೂ, ನೀರ ಹನಿಯಲ್ಲಿಯೂ, ಕಡಲ , ಸಿಡಿವ ಸಿಡಿಲಲ್ಲಿಯೂ
ಓಂ ಓಂ ಓಂ ಓಂ ಓಂ ಓಂ
ನೀನೇ ಇರುವೆ ದೇವ ಆsss

ಬಾನಲ್ಲಿ ನಿನ್ನಿಂದ ಸೂರ್ಯೋದಯ...

Saturday, September 18, 2010

ಅಳಬೇಡ ತಂಗಿ ಅಳಬೇಡ

ಚಿತ್ರ: ಸಂತ ಶಿಶುನಾಳ ಶರೀಫ
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ:
ಶಿವಮೊಗ್ಗ ಸುಬ್ಬಣ್ಣ



ಅಳಬೇಡ ತಂಗಿ ಅಳಬೇಡ
ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ

ದಡಿಕೀಲೆ ಉಡಿಯಕ್ಕಿ ಹಾಕಿದರವ್ವ
ಒಳ್ಳೆ ದುಡುಕೀಲೇ ಮುಂದಕ್ಕೆ ನೂಕಿದರವ್ವ
ಮಿಡಿಕ್ಯಾಡಿ ಮದಿವ್ಯಾದೆ ಮೋಜು ಕಾಣವ್ವ
ನೀ ಹುಡುಕ್ಯಾಡಿ ಮಾಯದ ಮರವೇರಿದ್ಯವ್ವ

ಅಳಬೇಡ ತಂಗಿ ಅಳಬೇಡ...

ರಂಗೀಲೀ ಉಟ್ಟೀದಿ ರೇಶ್ಮೀ ದಡಿ ಸೀರಿ
ಮತ್ತ ಹಂಗ ನೂಲಿನ ಪರಿವಿ ಮರಿತ್ಯವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತು ಆದ್ಯವ್ವ ಗೌರಿ

ಅಳಬೇಡ ತಂಗಿ ಅಳಬೇಡ...

Saturday, September 11, 2010

ಗುಡಿಯ ನೋಡಿರಣ್ಣಾ

ಚಿತ್ರ: ಸಂತ ಶಿಶುನಾಳ ಶರೀಫ
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ: ಸಿ.ಅಶ್ವಥ್



ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ...

ಆರು ಮೂರು ಕಟ್ಟಿ ಮೇಲಕೆ
ಏರಿದನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ...

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ...

Sunday, September 5, 2010

ಮೋಹದ ಹೆಂಡತಿ ತೀರಿದ ಬಳಿಕ

ಚಿತ್ರ: ಸಂತ ಶಿಶುನಾಳ ಶರೀಫ
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ: ಸಿ.ಅಶ್ವಥ್



ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರದ ಬೀಗನ
ಮಾತಿನ ಹಂಗೊಂದೆನಗ್ಯಾಕೋ?

ಖಂಡವನದಿ ಸೋಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವುದು ಭಯವ್ಯಾಕೋ?
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾಡುವುದ್ಯಾಕೋ?

ಮೋಹದ ಹೆಂಡತಿ ತೀರಿದ ಬಳಿಕ...

ತಂದೆ ಗೋವಿಂದ ಗುರುವಿನ ಸೇವಕ
ಕುಂದಗೋಳಕೆ ಬಂದು ನಿಂತನ್ಯಾಕೋ ?
ಬಂಧುರ ಶಿಶುನಾಳಾಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನವು ಸಾಕೋ.

ಮೋಹದ ಹೆಂಡತಿ ತೀರಿದ ಬಳಿಕ...

Sunday, August 29, 2010

ಸೋರುತಿಹುದು ಮನೆಯ ಮಾಳಿಗಿ

ಚಿತ್ರ: ಸಂತ ಶಿಶುನಾಳ ಶರೀಫ
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ: ಸಿ.ಅಶ್ವಥ್

ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ
ದಾರು ಗಟ್ಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ

ಸೋರುತಿಹುದು ಮನೆಯ ಮಾಳಿಗಿ...

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರುಕು ಚಪ್ಪರ ಜೇರುಗಿಂಡಿ
ಮೇಲಕೇರಿ ಹೋಗಲಾರೆ

ಸೋರುತಿಹುದು ಮನೆಯ ಮಾಳಿಗಿ...

ಕರಕಿ ಹುಲ್ಲು ಕಸವು ಹತ್ತಿ
ಹರಿದು ಸಾಲು ಇರಬಿ ಮುತ್ತಿ
ಜಲದ ಭರದಿ ಸರಿಯೆ ಮಣ್ಣು
ಒಳಗೆ ಹೊರಗೆ ಏಕವಾಗಿ

ಸೋರುತಿಹುದು ಮನೆಯ ಮಾಳಿಗಿ...

ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬು ಮಳೆಯು
ಎಂತೊ ಶಿಶುನಾಳಧೀಶನ ತಾನು
ನಿಂತು ಪೊರೆವನು ಎಂದು ನಂಬಿದೆ

ಸೋರುತಿಹುದು ಮನೆಯ ಮಾಳಿಗಿ...

Saturday, August 21, 2010

ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ

ಚಿತ್ರ:ಸಂತ ಶಿಶುನಾಳ ಶರೀಫ
ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ: ಸಿ.ಅಶ್ವಥ್



ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ
ಆಡು ಆನೆಯ ನುಂಗಿ
ಗೋಡೆ ಸುಣ್ಣಾವ ನುಂಗಿ
ಆಡಲು ಬಂದ ಪಾತರದವಳ
ಮದ್ದಳೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ

ಒಳ್ಳು ಒನಕೆಯ ನುಂಗಿ
ಕಲ್ಲು ಗೂಟಾವ
ಮೆಲ್ಲಲು ಬಂದ ಮುದುಕಿಯನ್ನೆ
ನೆಲ್ಲು ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ

ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ...

ಹಗ್ಗ ಮಗ್ಗಾವ ನುಂಗಿ
ಮಗ್ಗಾವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೆ
ಮಣಿಯು ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ

ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ...

ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯಾ ನುಂಗಿ
ಗೋವಿಂದಾ ಗುರುವಿನ ಪಾದ
ನನ್ನನೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ


ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ...

Thursday, August 12, 2010

ಜೀವ ಹೂವಾಗಿದೆ ಭಾವ ಜೇನಾಗಿದೆ

ಚಿತ್ರ: ನೀ ನನ್ನ ಗೆಲ್ಲಲಾರೆ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಇಳಯ ರಾಜ
ಹಿನ್ನಲೆ ಗಾಯನ: ಡಾ.ರಾಜಕುಮಾರ್ ಮತ್ತು ಎಸ್.ಜಾನಕಿ




ಐ ಲವ್ ಯೂ, ಐ ಲವ್ ಯೂ
ಐ ಲವ್ ಯೂ, ಐ ಲವ್ ಯೂ
ಜೀವ ಹೂವಾಗಿದೆ ಭಾವ ಜೇನಾಗಿದೆ
ಬಾಳು ಹಾಡಾಗಿದೆ ನಿನ್ನ ಸೇರಿ ನಾನು
ಸಂಜೆ ತಂಗಾಳಿ ತಂಪಾಗಿ ಬೀಸಿ
ಹೂವ ಕಂಪನ್ನು ಹಾದಿಗೇ ಹಾಸಿ
ತಂದಿದೆ ಹಿತವ ನಮಗಾಗಿ
ತಂದಿದೆ ಹಿತವ ನಮಗಾಗಿ
ಜೋಡಿ ಬಾನಾಡಿ, ಮೇಲೆ ಹಾರಾಡಿ
ತೇಲಾಡಿ ಓಲಾಡಿ ನಲಿವಂತೆ,
ನಾವು ಆಡೋಣ ಇನ್ನೇಕೆ ಬಾ ಚಿಂತೆ
ಜೀವ ಹೂವಾಗಿದೆ ಭಾವ ಜೇನಾಗಿದೆ...
ಇನ್ನು ನಿನ್ನಾಸೆ ನನ್ನಾಸೆ ಒಂದೇ
ಎಂದು ನಾವಾಡೋ ಮಾತೆಲ್ಲ ಒಂದೇ
ಬಯಕೆಯು ಒಂದೇ ಗುರಿಯೊಂದೆ
ಬಯಕೆಯು ಒಂದೇ ಗುರಿಯೊಂದೆ
ನಿನ್ನ ಚೆಲುವಿಂದ ನಿನ್ನ ಒಲವಿಂದೆ
ನನ್ನಲ್ಲಿ ನೀ ತಂದೆ ಆನಂದ
ಈ ಸಂತೋಷ ಸೌಭಾಗ್ಯ ನಿನ್ನಿಂದ
ಜೀವ ಹೂವಾಗಿದೆ ಭಾವ ಜೇನಾಗಿದೆ...

Thursday, July 15, 2010

ಒಲಿದ ಜೀವ ಜೊತೆಯಲಿರಲು ಬಾಳು ಸುಂದರ

ಚಿತ್ರ:ಬೆಂಕಿಯ ಬಲೆ
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ






ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಭವ್ಯವಾದ ಪ್ರೇಮ ಮಂದಿರ

ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ
ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ
ಕರವ ಹಿಡಿದಾಗ ನಗುತ ನಡೆವಾಗ ಭುವಿಯೇ ಸ್ವರ್ಗದಂತೆ

ಸನಿಹ ಕುಳಿತು ನುಡಿವ ನುಡಿಯು ಇಂಪಾದ ಹಾಡಿನಂತೆ
ಸನಿಹ ಕುಳಿತು ನುಡಿವ ನುಡಿಯು ಇಂಪಾದ ಹಾಡಿನಂತೆ
ಕನಸು ಕಣ್ಣಲ್ಲಿ ಸೊಗಸು ಎದುರಲ್ಲಿ ಬದುಕು ಕವಿತೆಯಂತೆ
ಕಣ್ಣೀರು ಪನ್ನೀರ ಹನಿಯಂತೆ

ಒಲಿದ ಜೀವ ಜೊತೆಯಲಿರಲು ಬಾಳು ಸುಂದರ...

ಉರಿವ ಬಿಸಿಲ ಸುರಿವ ರವಿಯೇ ತಂಪಾದ ಚಂದ್ರನಂತೆ
ಉರಿವ ಬಿಸಿಲ ಸುರಿವ ರವಿಯೇ ತಂಪಾದ ಚಂದ್ರನಂತೆ
ತುಳಿದ ಮುಳ್ಳೆಲ್ಲ ಅರಳಿ ಹೂವಂತೆ ಹಾದಿ ಮಿಟ್ಟಿಯಂತೆ

ಮೊಗದಿ ಹರಿವ ಬೆವರ ಹನಿಯು ಓಂದೊಂದು ಮುತ್ತಿನಂತೆ
ಮೊಗದಿ ಹರಿವ ಬೆವರ ಹನಿಯು ಓಂದೊಂದು ಮುತ್ತಿನಂತೆ
ಏನೊ ಉಲ್ಲಾಸ ಏನೊ ಸಂತೋಷ ಮರೆತು ಎಲ್ಲ ಚಿಂತೆ
ಒಲವಿಂದ ದಿನವೊಂದು ಕ್ಷಣವಂತೆ

ಒಲಿದ ಜೀವ ಜೊತೆಯಲಿರಲು ಬಾಳು ಸುಂದರ...

Tuesday, May 18, 2010

ಮುಂಜಾನೆ ಮೂಡಿದ ಹಾಗೆ

ಚಿತ್ರ: ಮುದುಡಿದ ತಾವರೆ ಅರಳಿತು
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಎಂ. ರಂಗರಾವ್
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ


ಮುಂಜಾನೆ ಮೂಡಿದ ಹಾಗೆ
ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ
ಕೆಂದಾವರೆ ನೀನು ನನಗೆ

ಹಸಿರಾದ ಪ್ರೀತಿಯ ಕಂಡು
ಉಸಿರಾಗ ಬಂದೆನು ನಾನು
ಸವಿಯಾದ ಸ್ನೇಹ ಮೋಹ ಬಲು
ಬೆಳೆದು ನಿಂತಿರಲು ಓಡಿ ಬಂದೆ ಬಳಿಗೆ

ಮುಂಜಾನೆ ಮೂಡಿದ ಹಾಗೆ...

ಹೊಸದಾದ ಆಸೆಯ ತೋರಿ
ಶಶಿಯಂತೆ ಬೆಳಗುವೆ ನೀನು
ಚೆಲುವಾದ ಬಾಳ ಕಡಲಿನಲಿ
ಒಲುಮೆ ದೋಣಿಯಲಿ ತೇಲು ನನ್ನ ಜೊತೆಗೆ

ಮುಂಜಾನೆ ಮೂಡಿದ ಹಾಗೆ...

Monday, May 17, 2010

ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ

ಚಿತ್ರ: ಅನುಪಮ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್ ಮತ್ತು ವೈದಿ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ



ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನ

ಮಮತೆ ಮೀಟಿ ಮಿಲನ ಕಂಡೇ
ನಿನ್ನ ಸ್ನೇಹ ಸೌಭಾಗ್ಯ ಮಿಂದೇ
ಹರೆಯಾ ತೂಗಿ ಸನಿಹಾ ಬಂದೇ
ಎಲ್ಲ ಪ್ರೀತಿ ಸನ್ಮೋಹ ತಂದೇ
ಹರುಷಾ ತಂದಾ ಹಾದಿಯೆ ಚಂದಾ
ಒಲವಿನಾಸರೆ ರೋಮಾಂಚಬಂಧಾ

ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ...

ಜೊತೆಯಾ ಸೇರೀ ಬರುವೆ ನಾನೂ
ನನ್ನ ಬಾಳ ಬಂಗಾರ ನೀನು
ಬೆಳಕು ನೀನೂ ಕಿರಣಾ ನಾನೂ
ನಿನ್ನ ಕೂಡಿ ಹೊಂಬಿಸಿಲ ಬಾನು
ನಿನಗೇ ನಾನು ನನಗೆ ನೀನು
ನಿನಗೇ ನಾನು ನನಗೆ ನೀನು
ಪ್ರೇಮ ಜೀವನ ಎಂದೆಂದು ಜೇನು

ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ...

Saturday, May 15, 2010

ನಿನ್ನಾ ರೂಪ ಎದೆಯ ಕಲಕಿ ಕಣ್ಣು ಮಿಂದಾಗ

ಚಿತ್ರ : ಪರಸಂಗದ ಗೆಂಡೆತಿಮ್ಮ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಜಾನಕಿ

ನಿನ್ನಾ ರೂಪ ಎದೆಯ ಕಲಕಿ ಕಣ್ಣು ಮಿಂದಾಗ
ನಿನ್ನಾ ನೋಟ ಕೂಡಿದಾಗ ಕಂಡೆ ಅನುರಾಗ

ಮನಸಿನ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ
ಹೃದಯದ ಕುಲುಮೆಯಾಗೆ ನೂರು ಬಯಕೆ ಸಿಡಿದೈತೆ
ನಿನ್ನ ಕಾಣುವ ಬಾವ ಬೆಳೆದು ನನ್ನ ಕನಸು ಕಡೆದೈತೆ

ನಿನ್ನಾ ರೂಪ ಎದೆಯ ಕಲಕಿ ಕಣ್ಣು ಮಿಂದಾಗ...

ತೆರೆಯದ ಬಯಕೆ ಬಾನು ದೂರ ದೂರ ಸರಿದೈತೆ
ಹರೆಯದ ಹಂಬಲ ಗಂಗೆ ಬಾಗಿ ಬಳುಕಿ ಹರಿದೈತೆ
ನಿನ್ನ ಸ್ನೇಹಕೆ ಬಾಳು ನಲಿದು ಆಸೆ ಗಂಧ ಹರಡೈತೆ

ನಿನ್ನಾ ರೂಪ ಎದೆಯ ಕಲಕಿ ಕಣ್ಣು ಮಿಂದಾಗ...

ಮರೆಯದ ಮೋಹ ಉಕ್ಕಿ ತೇಲಿ ತೇಲಿ ಮೊರೆದೈತೆ
ಇಂಗದ ದಾಹ ಬೇಗೆ ಕಾದೂ ಕಾದೂ ಕರೆದೈತೆ
ನಿನ್ನ ಸೇರುವ ರಾಗ ರಂಗಿಗೆ ನನ್ನ ಮನಸು ತೆರೆದೈತೆ

ನಿನ್ನಾ ರೂಪ ಎದೆಯ ಕಲಕಿ ಕಣ್ಣು ಮಿಂದಾಗ..

Sunday, May 9, 2010

ಓ ಗುಣವಂತ ಓ ಗುಣವಂತ

ಚಿತ್ರ: ಮಸಣದ ಹೂವು
ಸಾಹಿತ್ಯ: ವಿಜಯನಾರಸಿಂಹ
ಸಂಗೀತ : ವಿಜಯಭಾಸ್ಕರ
ಹಿನ್ನಲೆ ಗಾಯನ: ಎಸ್.ಜಾನಕಿ

ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲಾ
ಪದಗಳೇ ಸಿಗುತ್ತಿಲ್ಲ

ದಾರಿದೀಪ ತೋರುತಾ, ತೋರುತಾ
ಕರುಣೆ ಕಿರಣ ಬೀರುತಾ, ಬೀರುತಾ
ಬಂದೆ ನೀನು ಓ ಸ್ನೇಹಿತ, ಸ್ನೇಹಿತ
ನನ್ನ ಬಾಳು ಬೆಳಗಿದೆ, ಬೆಳಗಿದೆ

ಓ ಗುಣವಂತ ಓ ಗುಣವಂತ...

ಹೃದಯ ನಿನಗೆ ಸೋತಿದೆ, ಸೋತಿದೆ
ನುಡಿಗೆ ನಾಲಿಗೆ ನಾಚಿದೆ, ನಾಚಿದೆ
ಬಗೆಬಗೆ ಭಾವ ಮೂಡಿದೆ, ಮೂಡಿದೆ
ಮನವು ನಿನ್ನೇ ಹೊಗಳಿದೆ, ಹೊಗಳಿದೆ

ಓ ಗುಣವಂತ ಓ ಗುಣವಂತ...

ಪ್ರೇಮದಾಸೆ ತೋರಲಾರೆ, ತೋರಲಾರೆ
ಪ್ರಣಯ ಲೀಲೆ ಆಡಲಾರೆ, ಆಡಲಾರೆ
ಭಾಷೆಯ ಮೀರಿದೆ ಓ ಭಾವನೆ, ಕಾಮನೆ
ಆಸೆಯ ಮೀರಿದೆ ಮೋಹದ ಪ್ರೇರಣೆ

ಓ ಗುಣವಂತ ಓ ಗುಣವಂತ

Wednesday, May 5, 2010

ಅಮ್ಮ ಎಂದರೆ ಏನೋ ಹರುಷವು

ಚಿತ್ರ: ಕಳ್ಳ ಕುಳ್ಳ
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಡಾ.ಪಿ.ಬಿ.ಶ್ರೀನಿವಾಸ್, ಕೃಷ್ಣಮೂರ್ತಿ



ಅಮ್ಮ ಎಂದರೆ ಏನೋ ಹರುಷವು
ನಮ್ಮಾ ಪಾಲಿಗೆ ಅವಳೇ ದೈವವು
ಅಮ್ಮಾ ಎನ್ನಲೂ ಎಲ್ಲಾ ಮರೆತೆವು
ಎಂದೂ ಕಾಣದಾ ಸುಖವಾ ಕಂಡೆವು.

ಮೂರು ನದಿಯು ಸೇರಿ ಹರಿದು ಬಂದರೇನು?
ಜನರು ಅದರ ರಭಸ ಕಂಡು ಕಡಲು ಎನುವರೇನು?
ಕೋಟಿ ದೇವರೆಲ್ಲಾ ಕೂಡಿ ನಿಂತರೇನು
ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು
ಎಂದೋ ಕನಸಲಿ ಕಂಡಾ ನೆನಪಿದೆ
ಇಂದು ನಿನ್ನ ಕಾಣೋ ಆಸೆ ಎದೆಯಾ ತುಂಬಿದೆ

ಅಮ್ಮ ಎಂದರೆ ಏನೋ ಹರುಷವು...

ನನ್ನೀ ವಯಸು ಮರೆವೆ ಮಗುವೇ ಆಗಿ ಬಿಡುವೆ
ಅಮ್ಮ ನಿನ್ನ ಕಂದ ಬಂದೆ ನೋಡು ಎನ್ನುವೆ
ನನ್ನೀ ತೋಳಿನಲ್ಲಿ ಅವಳ ಬಳಸಿ ನಲಿವೆ
ಇನ್ನೂ ನಿನ್ನ ಎಂದೂ ಬಿಟ್ಟು ಇರೆನು ಎನ್ನುವೆ
ತಾಯಿ ಮಡಿಲಲಿ ನಾವು ಹೂಗಳು
ನಮ್ಮಾ ಬಾಳೀಗೆ ಅವಳೇ ಕಂಗಳು.

ಅಮ್ಮ ಎಂದರೆ ಏನೋ ಹರುಷವು...

Tuesday, May 4, 2010

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ

ಚಿತ್ರ: ಕೆರಳಿದ ಸಿಂಹ
ಸಂಗೀತ: ಸತ್ಯಂ
ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್, ಡಾ.ಪಿ.ಬಿ.ಶ್ರೀನಿವಾಸ್

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ

ಬಾಡದ ತಾವರೆ ಹೂವಿನ ಹಾಗೆ ಎಂದಿಗು ಆರದ ಜ್ಯೋತಿಯ ಹಾಗೆ
ಗೋಪುರವೇರಿದ ಕಲಶದ ಹಾಗೆ ಆ ಧೃವ ತಾರೆಯೆ ನಾಚುವ ಹಾಗೆ
ಜೊತೆಯಲಿ ಎಂದೆಂದು ನೀನಿರಬೇಕು ಬೇರೆ ಏನು ಬೇಡೆವು ನಾವು

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ...

ಸಂಜೆಯ ಗಾಳಿಯ ತಂಪಿನ ಹಾಗೆ ಮಲ್ಲಿಗೆ ಹೂವಿನ ಕಂಪಿನ ಹಾಗೆ
ಜೀವವ ತುಂಬುವ ಉಸಿರಿನ ಹಾಗೆ ನಮ್ಮನು ಸೇರಿ ಎಂದಿಗು ಹೀಗೆ
ನಗುತಲಿ ಒಂದಾಗಿ ನೀನಿರಬೇಕು ನಿನ್ನ ನೆರಳಲಿ ನಾವಿರಬೇಕು

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ...

ಸಾವಿರ ನದಿಗಳು ಸೇರಿದರೇನು ಸಾಗರಕೆ ಸಮನಾಗುವುದೇನು
ಶತಕೋಟಿ ದೇವರು ಹರಸಿದರೇನು ಅಮ್ಮನ ಹರಕೆಗೆ ಸರಿಸಾಟಿಯೇನು
ತಾಯಿಗೆ ಆನಂದ ತಂದರೆ ಸಾಕು ಬೇರು ಪೂಜೆ ಏತಕೆ ಬೇಕು

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ...

Monday, May 3, 2010

ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ

ಚಿತ್ರ : ಭಲೇಜೋಡಿ
ರಚನೆ: ಚಿ.ಉದಯಶಂಕರ್
ಸಂಗೀತ: ಆರ್. ರತ್ನ
ಹಿನ್ನಲೆ ಗಾಯನ: ಡಾ.ಪಿ.ಬಿ.ಶ್ರೀನಿವಾಸ್



ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ
ನಾ ಅಮ್ಮ ಎಂದಾಗ ಏನು ಸಂತೋಷವು
ನಿನ್ನ ಕಂಡಾಗ ಮನಕೇನು ಆನಂದವು
ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

ಹಾಲಿನ ಸುಧೆಯು ನಿನ್ನಯ ಮನಸು
ಜೇನಿನ ಸವಿಯು ನಿನ್ನ ಮಾತು..
ಪುಣ್ಯದ ಫಲವೊ
ದೇವರ ವರವೊ
ಸೇವೆಯ ಭಾಗ್ಯ ನನ್ನದಾಯ್ತು

ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

ತಾಯಿಯ ಮಮತೆ ಕಂಡ ದೇವನು
ಅಡಗಿದ ಎಲ್ಲೊ ಮರೆಯಾಗಿ
ತಾಯಿಯ ಶಾಂತಿಗೆ ಧರಣಿಯು ನಾಚಿ
ಮೌನದಿ ನಿಂತಳು ತಲೆಬಾಗಿ


ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

Sunday, May 2, 2010

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು

ಚಿತ್ರ: ಕಪ್ಪು ಬಿಳುಪು
ಸಾಹಿತ್ಯ : ಆರ್.ಎನ್. ಜಯಗೋಪಾಲ್
ಸಂಗೀತ : ಆರ್. ರತ್ನ
ಹಿನ್ನಲೆ ಗಾಯನ : ಪಿ.ಸುಶೀಲ



ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು
ಓಹೋ...ಓಹೋ...........

ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲೂ ನೀನೆ ನೀನು

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...

ನೀನು ಇತ್ತ ಹಣ್ಣುಗಳೆ ಅನ್ನ ನನಗೆ
ನಿನ್ನ ಮಡಿಲಿನಲೇ ನನ್ನ ಹಾಸಿಗೆ
ಬೀಸಿ ಬಂದ ಗಾಳಿಯಲ್ಲೂ ನಿನ್ನ ಮಾಯೆ
ಹರಿಯುವ ನದಿಯಲೂ ನಿನ್ನ ಛಾಯೆ

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...

ಊರುಬೇಡ ಕೇರಿಬೇಡ ಯಾರೂ ಬೇಡಾ
ಅಮ್ಮ ಒಮ್ಮೆ ಕಣ್ಣ ಬಿಟ್ಟು ನನ್ನ ನೋಡಾ
ತಾಯಿತಂದೆ ಬಂಧುಬಳಗ ನೀನೇ ಎಲ್ಲಾ
ನಿನಗಿಂತ ಬೇರೆ ದೇವರಿಲ್ಲಾ

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...

Thursday, April 29, 2010

ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ

ಚಿತ್ರ: ಜಿಮ್ಮಿಗಲ್ಲು
ಗೀತರಚನೆ:
ಚಿ.ಉದಯಶಂಕರ್
ಸಂಗೀತ: ವಿಜಯಭಾಸ್ಕರ
ಹಿನ್ನಲೆ ಗಾಯನ:ವಿಷ್ಣುವರ್ಧನ್


ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈಯಗಲ ಜಾಗ ಸಾಕು ಹಾಯಾಗಿರೋಕೆ

ಕಾಡ್ನಾಗೊಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರ್ನಾಗೊಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಕಾಡ್ನಾಗೊಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರ್ನಾಗೊಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಅಲ್ಲೇ ನನ್ನ ಹೋಗು ಅಂದರೇನು
ಸ್ವರ್ಗದಂತಾ ಊರು ನನ್ನ ಹತ್ತಿರ ಕರೆದಾಯ್ತು

ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ...

ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
ಕಷ್ಟಾ ಒಂದೇ ಬರದು ಸುಖವೂ ಬರದೇ ಇರದು
ರಾತ್ರೀ ಮುಗಿದಾ ಮೇಲೇ ಹಗಲು ಬಂದೇ ಬತ್ತೈತೆ

ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ...

ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೇ ನಂಗೆ ಅಪ್ಪ ಅಮ್ಮ ಎಲ್ಲಾ
ಸಾಯೋ ತನಕಾ ನಂಬಿದವರ ಕೈ ಬಿಡಾಕಿಲ್ಲ

ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ...

Wednesday, April 28, 2010

ಆಕಾಶ ದೀಪವು ನೀನು

ಚಿತ್ರ: ಪಾವನ ಗಂಗಾ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಜಾನಕಿ



ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು
ಮರೆಯಾದಾಗ ನೋವೇನು

ಕಂಡಂದೆ ಕುಣಿಯಿತು ಮನವು
ಹೂವಾಗಿ ಅರಳಿತು ತನುವು
ಹೃದಯದ ವೀಣೆಯನು ಹಿತವಾಗಿ ನುಡಿಸುತಲಿ
ಆನಂದ ತುಂಬಲು ನೀನು
ನಾ ನಲಿವೆನು

ಆಕಾಶ ದೀಪವು ನೀನು...

ಅನುರಾಗ ಮೂಡಿದ ಮೇಲೆ
ನೂರಾರು ಬಯಕೆಯ ಮಾಲೆ
ಹೃದಯವು ಧರಿಸಿದೆ
ಈ ಜೀವ ಸೋಲುತಿದೆ
ಸಂಗಾತಿ ಆದರೆ ನೀನು
ನಾ ಉಳಿವೆನು

ಆಕಾಶ ದೀಪವು ನೀನು...

ಹೂವಾದ ಆಸೆಯೆಲ್ಲ
ಮುಳ್ಳಾಗಿ ಹೋಯಿತಲ್ಲ
ಜೀವ ನೋವ ತಾಳದಲ್ಲ
ಸುಖ ಶಾಂತಿ ಇನ್ನಿಲ್ಲ
ನೆಮ್ಮದಿಯ ಕಾಣೆನು
ನಾ ಸೋತೆನು

ಆಕಾಶ ದೀಪವು ನೀನು...

Friday, March 12, 2010

ಈ ಗುಲಾಬಿಯು ನಿನಗಾಗಿ...

ಚಿತ್ರ: ಮುಳ್ಳಿನ ಗುಲಾಬಿ
ಸಂಗೀತ: ಸತ್ಯಂ
ಹಿನ್ನಲೆ ಗಾಯನ:ಎಸ್.ಪಿ


ಈ ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ
ನಿನಗಾಗೆ ಕೇಳೆ ಪ್ರೇಯಸಿ
ನಿನಗಾಗೆ ಕೇಳೆ ಓ ರತಿ

ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ಆತುರ ತರುವಾ ವೇದನೆಯೇನು
ಜೀವದ ಜೀವವು ಪ್ರಿಯತಮೆ ನೀನು

ಈ ಗುಲಾಬಿಯು ನಿನಗಾಗಿ...

ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು
ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು..
ಕಾಣದೆ ಹೋದರೆ ಅರೆಕ್ಷಣ ನಿನ್ನ
ಮರುಕ್ಷಣ ಪ್ರಿಯತಮೆ ನನ್ನ ಸಾವು

ಈ ಗುಲಾಬಿಯು ನಿನಗಾಗಿ...

Tuesday, March 9, 2010

ಚಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು...

ಚಿತ್ರ: ಟೋನಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ




ಚಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು
ಮಧುರಾ ಸಂಗೀತ ನೀನು ಹೃದಯಾ ಸಂಗಾತಿ ನಾನೂ

ಜೀವನಾ ಕಡಲಲ್ಲಿ ನೀ ಗಂಗೆ ಸಂಗಮದಂತೇ ಬೆರೆಯೆ ಓಡೋಡಿ ಬಂದೇ
ಪ್ರೇಮದಾ ಹೊಸ ಬಾನಲೀ ಲಜ್ಜೆ ಕೆಂಪೇರಿದಂತೇ ನೀನು ರಂಗನ್ನೇ ತಂದೇ
ಚಲುವನು ಸೂಸಿ ಬಲೆಯನು ಬೀಸಿ
ಚಲುವನು ಸೂಸಿ ಬಲೆಯನು ಬೀಸಿ
ಸೆಳೆದಾ ಸೊಗಸೂ ನಿಂದೇನೂ ಹೋ

ಚಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು...

ಪ್ರೀತಿಗೆ ಮುಳ್ಳಾಗಿಹಾ ತೆರೆಯು ದೂರಾಗಬೇಕೂ ಮನಸು ಒಂದಾಗಬೇಕೂ
ಕಂಬನೀ ಈ ಕಣ್ಣಲ್ಲೀ ಇಂದು ಕೊನೆಯಾಗ ಬೇಕೂ ನಗುತ ನೀನಿರಬೇಕೂ
ಜೀವವು ನೀನು ದೇಹವು ನಾನೂ
ಜೀವವು ನೀನು ದೇಹವು ನಾನೂ
ಮನವಾ ಕವಿದಾ ನೋವೇನು ಹೋ

ಚಲುವಾ ಪ್ರತಿಮೆ ನೀನು ನಲಿವಾ ರಸಿಕ ನಾನು...

Monday, March 8, 2010

ನೇಸರ ನೋಡು ನೇಸರ ನೋಡು...

ಚಿತ್ರ: ಕಾಕನ ಕೋಟೆ
ರಚನೆ: ಮಾಸ್ತಿ ವೆಂಕಟೇಶ ಐಯಂಗಾರ್
ಸಂಗೀತ: ಸಿ.ಅಶ್ವತ್ಥ್



ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು

ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ
ದೂರಾದ ಮಲೆಯ ತಲೆಯಾನೆ ಏರಿ

ನೇಸರ ನೋಡು ನೇಸರ ನೋಡು...

ಹೊರಳೀತು ಇರಳು ಬೆಳಕೀನ ಬೂಡು
ತೆರಯೀತು ನೋಡು ಬೆಳಗೀತು ನಾಡು

ನೇಸರ ನೋಡು ನೇಸರ ನೋಡು...

Sunday, March 7, 2010

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ...

ಚಿತ್ರ:ಬಂಗಾರದ ಹೂವು
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಪಿ.ಸುಶೀಲ, ಎಸ್.ಜಾನಕಿ



ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿ
ಕಹಿ ಎಲ್ಲ ನನಗಿರಲಿ

ಸಹನೆ ಮೀರಿ ಕಾಣದ ಕೈಗೆ ಮಾಡಿತೇನೋ ಮೈಯಿಗೆ ಮುಯ್ಯಿ
ಯಾರು ಇದಕೆ ಹೊಣೆಯೇ ಇಲ್ಲ ಇರಲಿ ನನಗೆ ನಿಂದನೆ ಎಲ್ಲ
ವಿಧಿಯು ಹೂಡಿ ಒಳಸಂಚನ್ನು ತೊರೆಯಿತೆನ್ನ ಹೊಂಗನಸನ್ನು
ನೋವ ನುಂಗಿ ಬಾಳುವೆ ನಾನು ಸುಖವು ನಿನ್ನ ಕಾಡಿತೇನು
ಈ ಬೇಗೆ ನೀಗಲಿ ಮನಸು ಹಗುರವಾಗಲಿ

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ...

ಏನೇನೊ ಬಯಸಿತು ಮನಸು ಕೈ ಸೇರೆ ಎಲ್ಲಾ ಸೊಗಸು
ಕೈ ಜಾರೆ ಎಲ್ಲಾ ಕನಸು ಆಸೆ ಮರೆತರೇ ಲೇಸು
ನನ್ನ ಕಣ್ಣ ನೀರಿನಲ್ಲಿ ನಿನ್ನ ಬಿಂಬ ಕಾಣುತಿರಲಿ
ಈ ಬಾಳು ಇಂತೆ ಇರಲಿ ನಿನ್ನ ನೆನವು ಚಿರವಾಗಿರಲಿ
ಈ ಬೇಗೆ ನೀಗಲಿ ಮನಸು ಹಗುರವಾಗಲಿ

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ...

ಮಧುವನ ಕರೆದರೆ...

ಚಿತ್ರ: ಇಂತಿ ನಿನ್ನ ಪ್ರೀತಿಯ
ಗೀತರಚನೆ: ಜಯಂತ್ ಕಾಯ್ಕಿಣಿ
ಸಂಗೀತ: ಸಾಧು ಕೋಕಿಲ
ಹಿನ್ನಲೆ ಗಾಯನ:ವಾಣಿ ಮತ್ತು ಚಿನ್ಮಯೀ




ಮಧುವನ ಕರೆದರೆ
ತನು ಮನ ಸೆಳೆದರೆ
ಶರಣಾಗು ನೀನು ಆದರೇ

ಬಿರುಗಾಳಿಯಲ್ಲಿ ತೇಲಿ
ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ್ಯಾ ಮುರಿದು
ಬಾ ಬಳಿಗೆ ಎಂದಿದೇ
ಶರಣಾಗು ಆದರೆ
ಸೆರೆಯಾಗು ಆದರೆ

ಮಧುವನ ಕರೆದರೆ...

ಕಂಗಳಲಿ ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ
ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೇ

ಮಧುವನ ಕರೆದರೆ...

ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವಾ ರೇಖೆಗಳಲ್ಲಿ
ನಾ ಮೂಡಬೇಕು ಆದರೇ
ಎದುರಿದ್ದು ಕರೆಯುವೇ ಏಕೆ
ಜೊತೆಯಿದ್ದು ಮರೆಯುವೇ ಏಕೆ
ನಿನ್ನೊಲವು ನಿಜವೇ ಆದರೇ

ಮಧುವನ ಕರೆದರೆ...

Friday, March 5, 2010

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ...

ಚಿತ್ರ: ಪ್ರೀತಿ ವಾತ್ಸಲ್ಯ
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ


ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ

ಹೂವರಳಿ ನಿಂತ ವೇಳೆ ಕಣ್ಮುಂದೆ ಬಂದಿತಲ್ಲೆ
ಪ್ರಿಯೆ ನಿನ್ನ ಕಾಡಿಗೆ ಕಣ್ಣ ಆ ನೋಟದಂದವೆ
ಕರೆ ನೀಡಿ ನೋಟದಲ್ಲಿ ನೀ ನಿಂತೆ ದೂರದಲ್ಲಿ
ಬಳಿ ಬಂದೆ ಬಯಸಿ ನಿನ್ನ ನೀ ಹೋದೆ ಕಾಣದೆ
ಆ ನೆನಪು ಕಾಡಿದೆ ನನ್ನ ಈ ಬೇಗೆ ತಾಳೆನು ಚಿನ್ನ

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ...

ಕಾವೇರಿ ನೀರಿನಲ್ಲು ಕನ್ನಡದ ಕಾವ್ಯದಲ್ಲು
ಬೇಲೂರ ಬಾಲೆಯಲ್ಲೂ ನಾ ಕಂಡೆ ನಿನ್ನನ್ನು
ಒಂದೊಂದು ಭಂಗಿಯಲ್ಲು ಒಂದೊಂದು ಭಾವದಲ್ಲೂ
ಒಂದೊಂದು ಮಾತಿನಲ್ಲು ನೀ ಸೆಳೆದೆ ನನ್ನನು
ನೀ ನಿಂತೆ ಕಣ ಕಣದಲ್ಲು ನನ್ನೆದೆಯ ಉಸಿರುಸಿರಲ್ಲು

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ...

Wednesday, March 3, 2010

ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ

ಚಿತ್ರ: ವಿಜಯವಾಣಿ
ಗೀತರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ:ಎಸ್.ಜಾನಕಿ ಮತ್ತು ವಾಣಿ ಜಯರಾಮ್


ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ಒಲವಿನಾ ಲೋಕಕೇ ನೀ ತಂದೇ ಪೌರ್ಣಿಮಾ

ನಾ ಪ್ರೇಮದರಮನೆಯಲ್ಲೀ ವೈಭೋಗ ಸಿರಿಯನು ಕಂಡೇ
ನನ್ನೆದೆಯ ಸಿಂಹಾಸನದೀ ನೀ ರಾಜ್ಯವಾಳಿದೇ
ನೀ ನನ್ನ ಬಾಳಿನ ಪುಟದೇ ಅನುರಾಗ ಕವಿತೆಯ ಬರೆದೇ
ನಾನಾಗ ಭಾವದ ಹೊಳೆಯಾ ಅಲೆಯಲ್ಲಿ ತೇಲಿದೇ
ಅಲೆಯಲ್ಲಿ ತೇಲಿ ತೇಲಿದೇ

ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ...

ರಸಪೂರ್ಣ ಮೈತ್ರಿಯ ಸಮಯಾ ನೂರಾಸೆ ಕಡಲಿದು ಹೃದಯಾ
ನೀ ನಡೆಸು ಅಂಬಿಗನಾಗಿ ಒಲವೆಂಬ ನೌಕೆಯಾ
ಬಂಗಾರ ತೇರನು ಏರೀ ನಾ ನಿನ್ನ ಸಂಗದಿ ಬೆರೆವೆ
ಸುಖವೆಂಬ ಉಯ್ಯಾಲೆಯಲೀ ಸಖ ನಿನ್ನಾ ತೂಗುವೇ
ಹಾಯಾಗಿ ತೂಗಿ ಕೂಗುವೇ

ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ...

Tuesday, March 2, 2010

ಜೋ ಜೋ ಲಾಲೀ ನಾ ಹಾಡುವೇ

ಚಿತ್ರ: ಚಿನ್ನಾ ನಿನ್ನಾ ಮುದ್ದಾಡುವೆ
ಸಂಗೀತ: ಸಲೀಲ್ ಚೌಧರಿ
ಹಿನ್ನಲೆ ಗಾಯನ: ಕೆ.ಜೆ.ಏಸುದಾಸ್, ಎಸ್.ಜಾನಕಿ, ಅನಿತಾ(ಅಂತರಾ) ಚೌಧರಿ







ಜೋ ಜೋ ಲಾಲೀ ನಾ ಹಾಡುವೇ
ಚಿನ್ನಾ ನಿನ್ನಾ ಮುದ್ದಾಡುವೇ
ಹೂವಂತ ಕನಸೂ ತಾ ಮೂಡಿ ಬರಲಿ
ನಗುವಾ ಅಳುವಾ ಕಣ್ಣಲ್ಲಿ ಇಂದೂ

ಜೋ ಜೋ ಲಾಲೀ ನಾ ಹಾಡುವೇ...

ನಿದಿರಾ ದೇವೀ ಬಾ ಮೆಲ್ಲಗೇ
ತಾರೆಯಿಂದಾ ಈ ಭೂಮಿಗೇ
ಸಾವಿರ ರಂಗಿನ ಮಳೆಬಿಲ್ಲಿನಾ
ಮಾಲೆಯ ಧರಿಸೀ ಬಾ ಇಲ್ಲಿಗೇ
ಚಿನ್ನದ ತೇರಲಿ ಒಲವಿಂದ ಬಂದು
ತಾರೇ ಮುತ್ತು ಕಂದಂಗೆ ಇಂದು

ಜೋ ಜೋ ಲಾಲೀ ನಾ ಹಾಡುವೇ...

ಚಿಪ್ಪೀ ಮಡಿಲಾ ಮುತ್ತಂತೆಯೇ
ದೀಪದೆ ಜ್ಯೋತಿ ಇರುವಂತೆಯೇ
ಕಿರಣದೇ ಕಾಂತಿ ಕುಳಿತಂತೆಯೇ
ಮೊಗ್ಗಲಿ ಸೌರಭ ಇರುವಂತೆಯೇ
ರಾತ್ರಿ ಸೆರಗೂ ಹಾಸಿರಲಿಂದೂ
ಮಲಗೂ ಮಮತೆ ಮಡಿಲಲ್ಲಿ ಬಂದೂ

ಜೋ ಜೋ ಲಾಲೀ ನಾ ಹಾಡುವೇ...

Monday, March 1, 2010

ತಾರೆಯು ಬಾನಿಗೆ ತಾವರೆ ನೀರಿಗೆ...

ಚಿತ್ರ: ಬಿಳಿಗಿರಿಯ ಬನದಲ್ಲಿ
ಗೀತರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ, ಎಸ್.ಜಾನಕಿ




ತಾರೆಯು ಬಾನಿಗೆ ತಾವರೆ ನೀರಿಗೆ
ಹೂವೆಲ್ಲ ವನದೇವಿ ಮುಡಿಗೆ
ನೀ ನನ್ನ ಬಾಳಿಗೆ
ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ, ಕಣ್ಣಲ್ಲಿ, ಮನದಲ್ಲಿ

ತಾರೆಯು ಬಾನಿಗೆ ತಾವರೆ ನೀರಿಗೆ...

ಸೂರ್ಯ ಬಾನಲಿ ಬೆಳಕು ಭೂಮಿಯಲ್ಲಿ
ಹೂಗಳು ಲತೆಯಲಿ ನೀನೆಂದು ನನ್ನಲಿ
ಮೋಡ ಬಾನಲಿ ಮಳೆಯು ಭೂಮಿಯಲ್ಲಿ
ದುಂಬಿಯು ಹೂವಲಿ ನಾನೆಂದು ನಿನ್ನಲಿ, ನಾನೆಂದೂ ನಿನ್ನಲಿ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ಹೂದಂಡೆ ಈ ಹೆಣ್ಣ ಮುಡಿಗೆ
ನೀ ನನ್ನ ಬಾಳಿಗೆ
ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ, ಕಣ್ಣಲ್ಲಿ, ಮನದಲ್ಲಿ

ತಾರೆಯು ಬಾನಿಗೆ ತಾವರೆ ನೀರಿಗೆ...

ನಿನ್ನಾ ಕಾಣದಾ ದಿನವೂ ವರುಷದಂತೆ
ನಿನ್ನನು ಸೇರಲು ಯುಗವೊಂದು ನಿಮಿಷದಂತೆ
ನಿನ್ನಾ ನೋಡಲು ಬಯಕೆ ಹೃದಯದಲ್ಲಿ
ನಾಚುತ ಕರಗಿದೆ ನನ್ನಾಸೆ ನಿನ್ನಲಿ, ನನ್ನಾಸೆ ನಿನ್ನಲಿ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ಹೂದಂಡೆ ಈ ಹೆಣ್ಣ ಮುಡಿಗೆ
ನೀ ನನ್ನ ಬಾಳಿಗೆ
ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ, ಕಣ್ಣಲ್ಲಿ, ಮನದಲ್ಲಿ

ತಾರೆಯು ಬಾನಿಗೆ ತಾವರೆ ನೀರಿಗೆ...

Saturday, February 27, 2010

ಸುಖದಾ ಸ್ವಪ್ನಗಾನ ಎದೆಯಾ ಆಸೆ ತಾನ

ಚಿತ್ರ: ಮರೆಯದ ಹಾಡು
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ : ಜಿ. ಕೆ. ವೆಂಕಟೇಶ್
ಗಾಯನ : ಎಸ್.ಜಾನಕಿ


ಸುಖದಾ ಸ್ವಪ್ನಗಾನ ಎದೆಯಾ ಆಸೆ ತಾನ
ಒಲವಾ ಭಾವವೀಣಾ
ನೀ ಮಿಡಿಯೆ ನಾ ನುಡಿಯೆ
ಅದುವೆ ಜೀವನ..

ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ
ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ
ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ
ತಪಸಿನಾ ಫಲವಿದೂ ದೈವದಾ ವರವಿದೂ
ಆ..ಆ..

ಸುಖದಾ ಸ್ವಪ್ನಗಾನ ಎದೆಯಾ ಆಸೆ ತಾನ

ಶೃತಿಲಯದ ಮಿಲನದಲ್ಲೇ ದೈವೀಕನಾದನಾದ ಲೀಲೆ
ಸತಿಪತಿಯ ಒಲವಿನಲ್ಲೇ ಸ೦ಸಾರ ನೌಕೆ ತೇಲೆ
ನೆನಪಿನ ತೋಟದ ಮಲ್ಲೇ ಹೂ ಮಾಲೆ
ಎ೦ದಿಗೂ ಬಾಡದಾ ಹೂವಿದು ಮುಗಿಯದಾ ಹಾಡಿದು
ಆ..ಆ..

ಸುಖದಾ ಸ್ವಪ್ನಗಾನ ಎದೆಯಾ ಆಸೆ ತಾನ

ಸವಿ ಮುರಳಿ ಕರೆದ ವೇಳೆ ಆ ರಾಧೆ ಓಡಿದ೦ತೆ
ಮಾಧವನ ನೆನಪಿನಲ್ಲೇ ಆ ಮೀರಾ ಹಾಡಿದ೦ತೆ
ನಿನ್ನೊಲವಿನಲ್ಲೆ ಮಿ೦ದೂ ನಾನಿ೦ದೂ
ಹಾಡುವೇ ನನ್ನನೇ ಮರೆಯುವೇ ನಿಮ್ಮಲೇ ಬೆರೆಯುವೆ
ಆ..ಆ..

ಸುಖದಾ ಸ್ವಪ್ನಗಾನ ಎದೆಯಾ ಆಸೆ ತಾನ