Wednesday, July 9, 2008

ಮುಚ್ಚುಮರೆ ಇಲ್ಲದೆಯೇ

ರಚನೆ: ಕುವೆಂಪು
ಸಂಗೀತ: ಮೈಸೂರು ಅನಂತಸ್ವಾಮಿ
ಹಿನ್ನಲೆ ಗಾಯನ: ಪುಷ್ಪ ಜಗದೀಶ್


ಮುಚ್ಚುಮರೆ ಇಲ್ಲದೆಯೇ
ನಿನ್ನ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೇ, ಅಂತರಾತ್ಮ

ಪಾಪವಿದೆ ಪುಣ್ಯವಿದೆ
ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೇ, ಅಂತರಾತ್ಮ

ಮುಚ್ಚುಮರೆ ಇಲ್ಲದೆಯೇ...

ರವಿಗೆ ಕಾಂತಿಯನೀವೆ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೆ
ನರಕ ತಾನುಳಿಯುವುದೇ ನರಕವಾಗಿ

ಮುಚ್ಚುಮರೆ ಇಲ್ಲದೆಯೇ...

ಸಾಂತರೀತಿಯೊಳೆಮ್ಮಿ ಕದಡಿರುವುದೆನ್ನಾತ್ಮ
ನಾಂತರೀತಿಯು ಅದೆಂತೋ, ಓ ಅನಂತಾ..
ನನ್ನ ರೀತಿಯ ಕುರುಡಿಂದೆನ್ನ ರಕ್ಷಿಸೈ
ನಿನ್ನ ನೀತಿಯ ಬೆಳಗಿನ ಅನಂತಕೊಯ್

ಮುಚ್ಚುಮರೆ ಇಲ್ಲದೆಯೇ...

1 comment:

Anonymous said...

Congratulation... i am very happy to see ur 'namma sangraha'.