Showing posts with label ಒಂದೇ ಗುರಿ. Show all posts
Showing posts with label ಒಂದೇ ಗುರಿ. Show all posts

Monday, June 23, 2008

ಈ ಭಾವಗೀತೆ ನಿನಗಾಗಿ ಹಾಡಿದೆ

ಚಿತ್ರ: ಒಂದೇ ಗುರಿ
ರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ

ಈ ಭಾವಗೀತೆ ನಿನಗಾಗಿ ಹಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ

ಬಳ್ಳಿಯಲಿ ಹೂವು ತುಂಬಿ ಮರಗಳಲಿ ಜೀವ ತುಂಬಿ
ಎಲ್ಲೆಲ್ಲಿ ನೊಡಿದರಲ್ಲಿ ಹೊಸ ಹಸಿರು ತುಂಬಿದೆ
ಹಾಡುತಿರೆ ದುಂಬಿಗಳೆಲ್ಲ ಹಾರುತಿರೆ ಹಕ್ಕಿಗಳೆಲ್ಲಾ
ತೋಳಿoದ ನನ್ನನು ಬಳಸಿ ನೀ ಸನಿಹ ನಿಂತಿರೇ
ನಿನ ಅಂದ ಕಂಡು ಸಂತೋಷಗೊಂಡು ಹೊಸ ಭಾವ ಮೂಡಲು

ಈ ಭಾವಗೀತೆ ನಿನಗಾಗಿ ...

ಕಣ್ಣಿನಲಿ ರೂಪ ತುಂಬಿ ಮನಸಿನಲಿ ಪ್ರೇಮ ತುಂಬಿ
ನನ್ನೆದೆಯ ವೀಣೆಯ ಮೀಟಿ ಹೊಸ ನಾದ ತುಂಬಿದೆ
ಆಸೆಗಳ ಕಣ್ಣು ತುಂಬಿ ಮೋಹವನು ತುಂಬಿ ತುಂಬಿ
ನೂರಾರು ಕನಸುಗಳನ್ನು ಬಾಳಲ್ಲಿ ತುಂಬಿದೆ
ಹೀಗೇಕೆ ನೀ ಮೌನವಾದೆ ಕಾರಣ ಹೇಳದೇ

ಈ ಭಾವಗೀತೆ ನಿನಗಾಗಿ...