Showing posts with label ಜಯಚಂದ್ರ. Show all posts
Showing posts with label ಜಯಚಂದ್ರ. Show all posts

Wednesday, June 6, 2007

ಹಿಂದೂಸ್ಥಾನುವು ಎಂದೂ ಮರೆಯದ

ಚಿತ್ರ: ಅಮೃತ ಘಳಿಗೆ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ವಿಜಯಭಾಸ್ಕರ
ಹಿನ್ನಲೆ ಗಾಯಕ: ಜಯಚಂದ್ರ


ಹಿಂದೂಸ್ಥಾನುವು ಎಂದೂ ಮರೆಯದ
ಭಾರತ ರತ್ನವು ಜನ್ಮಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ
ಈ ಕನ್ನಡ ನುಡಿಯಾ ಗುಡಿಯಲ್ಲಿ

ಧೇಶಭಕ್ತಿಯ ಬಿಸಿ ಬಿಸಿ ನೆತ್ತರು
ಧಮನಿ ಧಮನಿಯಲಿ ತುಂಬಿರಲಿ
ವಿಶ್ವಪ್ರೇಮದಾ ಶಾಂತಿ ಮಂತ್ರದ
ಘೋಷವ ಎಲ್ಲೆಡೆ ಮೋಳಗಿಸಲಿ
ಸಕಲ ಧರ್ಮದ ಸತ್ವ ಸಮನ್ವಯ
ತತ್ವ ಜ್ಯೋತಿಯ ಬೆಳಗಿಸಲಿ

ಹಿಂದೂಸ್ಥಾನುವು ಎಂದೂ ಮರೆಯದ...

ಕನ್ನಡ ತಾಯಿಯ ಕೋಮಲ ಹೃದಯದ
ಭವ್ಯ ಶಾಸನ ಬರೆಯಿಸಲಿ
ಕನ್ನಡ ನಾಡಿನ ಎದೆ ಎದೆಯಲ್ಲೂ
ಕನ್ನಡ ವಾಣಿಯ ಸ್ಥಾಪಿಸಲಿ
ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ
ಕಲ್ಲು ಕಲ್ಲಿನಲೂ ಕೆತ್ತಿಸಲಿ

ಹಿಂದೂಸ್ಥಾನುವು ಎಂದೂ ಮರೆಯದ...