ಚಿತ್ರ: ಕಾಮನಬಿಲ್ಲು
ರಚನೆ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಹಾಗೂ ಸುಲೋಚನಾ
ನೀನಾಡದಾ ಮಾತು ಮಾತಲ್ಲ
ನೀನಾಡದಾ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ
ನಲ್ಲೆ ನೀನು ಮುಡಿಯದ ಹೂವಲ್ಲಿ ಅಂದವಿಲ್ಲ
ಚೆಲುವೆ ನೀನು ಸವಿಯದ ಹಣ್ಣಲ್ಲಿ ಸಿಹಿಯು ಇಲ್ಲ
ನಿನ್ನಂಥ ಮಾತುಗಾರನ ಇನ್ನೆಲ್ಲೂ ನಾನು ಕಾಣೆನು
ಇನಿಯ ಸೋತೆನು
ನೀನಾಡದಾ ಮಾತು...
ನಲ್ಲ ನಿನ್ನ ಕಾಣದ ದಿನವೆಲ್ಲ ಶಾಂತಿಯಿಲ್ಲ
ಚೆಲುವ ನಿನ್ನ ಸೇರದ ಇರುಳಲ್ಲಿ ಸೌಖ್ಯವಿಲ್ಲ
ಮುದ್ದಾಗಿ ಮಾತನಾಡುತ ಮಾತಲ್ಲಿ ನಿನ್ನ ಗೆಲ್ಲುತ
ಸರಸ ತುಂಬಿದೆ
ನೀನಾಡದಾ ಮಾತು ಮಾತಲ್ಲ...
Showing posts with label ಸುಲೋಚನಾ. Show all posts
Showing posts with label ಸುಲೋಚನಾ. Show all posts
Thursday, October 16, 2008
Subscribe to:
Posts (Atom)
