Showing posts with label ಚಿ.ಉದಯಶಂಕರ್. Show all posts
Showing posts with label ಚಿ.ಉದಯಶಂಕರ್. Show all posts

Thursday, August 12, 2010

ಜೀವ ಹೂವಾಗಿದೆ ಭಾವ ಜೇನಾಗಿದೆ

ಚಿತ್ರ: ನೀ ನನ್ನ ಗೆಲ್ಲಲಾರೆ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಇಳಯ ರಾಜ
ಹಿನ್ನಲೆ ಗಾಯನ: ಡಾ.ರಾಜಕುಮಾರ್ ಮತ್ತು ಎಸ್.ಜಾನಕಿ




ಐ ಲವ್ ಯೂ, ಐ ಲವ್ ಯೂ
ಐ ಲವ್ ಯೂ, ಐ ಲವ್ ಯೂ
ಜೀವ ಹೂವಾಗಿದೆ ಭಾವ ಜೇನಾಗಿದೆ
ಬಾಳು ಹಾಡಾಗಿದೆ ನಿನ್ನ ಸೇರಿ ನಾನು
ಸಂಜೆ ತಂಗಾಳಿ ತಂಪಾಗಿ ಬೀಸಿ
ಹೂವ ಕಂಪನ್ನು ಹಾದಿಗೇ ಹಾಸಿ
ತಂದಿದೆ ಹಿತವ ನಮಗಾಗಿ
ತಂದಿದೆ ಹಿತವ ನಮಗಾಗಿ
ಜೋಡಿ ಬಾನಾಡಿ, ಮೇಲೆ ಹಾರಾಡಿ
ತೇಲಾಡಿ ಓಲಾಡಿ ನಲಿವಂತೆ,
ನಾವು ಆಡೋಣ ಇನ್ನೇಕೆ ಬಾ ಚಿಂತೆ
ಜೀವ ಹೂವಾಗಿದೆ ಭಾವ ಜೇನಾಗಿದೆ...
ಇನ್ನು ನಿನ್ನಾಸೆ ನನ್ನಾಸೆ ಒಂದೇ
ಎಂದು ನಾವಾಡೋ ಮಾತೆಲ್ಲ ಒಂದೇ
ಬಯಕೆಯು ಒಂದೇ ಗುರಿಯೊಂದೆ
ಬಯಕೆಯು ಒಂದೇ ಗುರಿಯೊಂದೆ
ನಿನ್ನ ಚೆಲುವಿಂದ ನಿನ್ನ ಒಲವಿಂದೆ
ನನ್ನಲ್ಲಿ ನೀ ತಂದೆ ಆನಂದ
ಈ ಸಂತೋಷ ಸೌಭಾಗ್ಯ ನಿನ್ನಿಂದ
ಜೀವ ಹೂವಾಗಿದೆ ಭಾವ ಜೇನಾಗಿದೆ...

Thursday, July 15, 2010

ಒಲಿದ ಜೀವ ಜೊತೆಯಲಿರಲು ಬಾಳು ಸುಂದರ

ಚಿತ್ರ:ಬೆಂಕಿಯ ಬಲೆ
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ






ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ಭವ್ಯವಾದ ಪ್ರೇಮ ಮಂದಿರ

ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ
ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ
ಕರವ ಹಿಡಿದಾಗ ನಗುತ ನಡೆವಾಗ ಭುವಿಯೇ ಸ್ವರ್ಗದಂತೆ

ಸನಿಹ ಕುಳಿತು ನುಡಿವ ನುಡಿಯು ಇಂಪಾದ ಹಾಡಿನಂತೆ
ಸನಿಹ ಕುಳಿತು ನುಡಿವ ನುಡಿಯು ಇಂಪಾದ ಹಾಡಿನಂತೆ
ಕನಸು ಕಣ್ಣಲ್ಲಿ ಸೊಗಸು ಎದುರಲ್ಲಿ ಬದುಕು ಕವಿತೆಯಂತೆ
ಕಣ್ಣೀರು ಪನ್ನೀರ ಹನಿಯಂತೆ

ಒಲಿದ ಜೀವ ಜೊತೆಯಲಿರಲು ಬಾಳು ಸುಂದರ...

ಉರಿವ ಬಿಸಿಲ ಸುರಿವ ರವಿಯೇ ತಂಪಾದ ಚಂದ್ರನಂತೆ
ಉರಿವ ಬಿಸಿಲ ಸುರಿವ ರವಿಯೇ ತಂಪಾದ ಚಂದ್ರನಂತೆ
ತುಳಿದ ಮುಳ್ಳೆಲ್ಲ ಅರಳಿ ಹೂವಂತೆ ಹಾದಿ ಮಿಟ್ಟಿಯಂತೆ

ಮೊಗದಿ ಹರಿವ ಬೆವರ ಹನಿಯು ಓಂದೊಂದು ಮುತ್ತಿನಂತೆ
ಮೊಗದಿ ಹರಿವ ಬೆವರ ಹನಿಯು ಓಂದೊಂದು ಮುತ್ತಿನಂತೆ
ಏನೊ ಉಲ್ಲಾಸ ಏನೊ ಸಂತೋಷ ಮರೆತು ಎಲ್ಲ ಚಿಂತೆ
ಒಲವಿಂದ ದಿನವೊಂದು ಕ್ಷಣವಂತೆ

ಒಲಿದ ಜೀವ ಜೊತೆಯಲಿರಲು ಬಾಳು ಸುಂದರ...

Wednesday, May 5, 2010

ಅಮ್ಮ ಎಂದರೆ ಏನೋ ಹರುಷವು

ಚಿತ್ರ: ಕಳ್ಳ ಕುಳ್ಳ
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಡಾ.ಪಿ.ಬಿ.ಶ್ರೀನಿವಾಸ್, ಕೃಷ್ಣಮೂರ್ತಿ



ಅಮ್ಮ ಎಂದರೆ ಏನೋ ಹರುಷವು
ನಮ್ಮಾ ಪಾಲಿಗೆ ಅವಳೇ ದೈವವು
ಅಮ್ಮಾ ಎನ್ನಲೂ ಎಲ್ಲಾ ಮರೆತೆವು
ಎಂದೂ ಕಾಣದಾ ಸುಖವಾ ಕಂಡೆವು.

ಮೂರು ನದಿಯು ಸೇರಿ ಹರಿದು ಬಂದರೇನು?
ಜನರು ಅದರ ರಭಸ ಕಂಡು ಕಡಲು ಎನುವರೇನು?
ಕೋಟಿ ದೇವರೆಲ್ಲಾ ಕೂಡಿ ನಿಂತರೇನು
ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು
ಎಂದೋ ಕನಸಲಿ ಕಂಡಾ ನೆನಪಿದೆ
ಇಂದು ನಿನ್ನ ಕಾಣೋ ಆಸೆ ಎದೆಯಾ ತುಂಬಿದೆ

ಅಮ್ಮ ಎಂದರೆ ಏನೋ ಹರುಷವು...

ನನ್ನೀ ವಯಸು ಮರೆವೆ ಮಗುವೇ ಆಗಿ ಬಿಡುವೆ
ಅಮ್ಮ ನಿನ್ನ ಕಂದ ಬಂದೆ ನೋಡು ಎನ್ನುವೆ
ನನ್ನೀ ತೋಳಿನಲ್ಲಿ ಅವಳ ಬಳಸಿ ನಲಿವೆ
ಇನ್ನೂ ನಿನ್ನ ಎಂದೂ ಬಿಟ್ಟು ಇರೆನು ಎನ್ನುವೆ
ತಾಯಿ ಮಡಿಲಲಿ ನಾವು ಹೂಗಳು
ನಮ್ಮಾ ಬಾಳೀಗೆ ಅವಳೇ ಕಂಗಳು.

ಅಮ್ಮ ಎಂದರೆ ಏನೋ ಹರುಷವು...

Monday, May 3, 2010

ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ

ಚಿತ್ರ : ಭಲೇಜೋಡಿ
ರಚನೆ: ಚಿ.ಉದಯಶಂಕರ್
ಸಂಗೀತ: ಆರ್. ರತ್ನ
ಹಿನ್ನಲೆ ಗಾಯನ: ಡಾ.ಪಿ.ಬಿ.ಶ್ರೀನಿವಾಸ್



ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ
ನಾ ಅಮ್ಮ ಎಂದಾಗ ಏನು ಸಂತೋಷವು
ನಿನ್ನ ಕಂಡಾಗ ಮನಕೇನು ಆನಂದವು
ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

ಹಾಲಿನ ಸುಧೆಯು ನಿನ್ನಯ ಮನಸು
ಜೇನಿನ ಸವಿಯು ನಿನ್ನ ಮಾತು..
ಪುಣ್ಯದ ಫಲವೊ
ದೇವರ ವರವೊ
ಸೇವೆಯ ಭಾಗ್ಯ ನನ್ನದಾಯ್ತು

ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

ತಾಯಿಯ ಮಮತೆ ಕಂಡ ದೇವನು
ಅಡಗಿದ ಎಲ್ಲೊ ಮರೆಯಾಗಿ
ತಾಯಿಯ ಶಾಂತಿಗೆ ಧರಣಿಯು ನಾಚಿ
ಮೌನದಿ ನಿಂತಳು ತಲೆಬಾಗಿ


ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

Thursday, April 29, 2010

ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ

ಚಿತ್ರ: ಜಿಮ್ಮಿಗಲ್ಲು
ಗೀತರಚನೆ:
ಚಿ.ಉದಯಶಂಕರ್
ಸಂಗೀತ: ವಿಜಯಭಾಸ್ಕರ
ಹಿನ್ನಲೆ ಗಾಯನ:ವಿಷ್ಣುವರ್ಧನ್


ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈಯಗಲ ಜಾಗ ಸಾಕು ಹಾಯಾಗಿರೋಕೆ

ಕಾಡ್ನಾಗೊಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರ್ನಾಗೊಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಕಾಡ್ನಾಗೊಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರ್ನಾಗೊಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಅಲ್ಲೇ ನನ್ನ ಹೋಗು ಅಂದರೇನು
ಸ್ವರ್ಗದಂತಾ ಊರು ನನ್ನ ಹತ್ತಿರ ಕರೆದಾಯ್ತು

ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ...

ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
ಕಷ್ಟಾ ಒಂದೇ ಬರದು ಸುಖವೂ ಬರದೇ ಇರದು
ರಾತ್ರೀ ಮುಗಿದಾ ಮೇಲೇ ಹಗಲು ಬಂದೇ ಬತ್ತೈತೆ

ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ...

ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೇ ನಂಗೆ ಅಪ್ಪ ಅಮ್ಮ ಎಲ್ಲಾ
ಸಾಯೋ ತನಕಾ ನಂಬಿದವರ ಕೈ ಬಿಡಾಕಿಲ್ಲ

ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ...

Wednesday, April 28, 2010

ಆಕಾಶ ದೀಪವು ನೀನು

ಚಿತ್ರ: ಪಾವನ ಗಂಗಾ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಜಾನಕಿ



ಆಕಾಶ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು
ಮರೆಯಾದಾಗ ನೋವೇನು

ಕಂಡಂದೆ ಕುಣಿಯಿತು ಮನವು
ಹೂವಾಗಿ ಅರಳಿತು ತನುವು
ಹೃದಯದ ವೀಣೆಯನು ಹಿತವಾಗಿ ನುಡಿಸುತಲಿ
ಆನಂದ ತುಂಬಲು ನೀನು
ನಾ ನಲಿವೆನು

ಆಕಾಶ ದೀಪವು ನೀನು...

ಅನುರಾಗ ಮೂಡಿದ ಮೇಲೆ
ನೂರಾರು ಬಯಕೆಯ ಮಾಲೆ
ಹೃದಯವು ಧರಿಸಿದೆ
ಈ ಜೀವ ಸೋಲುತಿದೆ
ಸಂಗಾತಿ ಆದರೆ ನೀನು
ನಾ ಉಳಿವೆನು

ಆಕಾಶ ದೀಪವು ನೀನು...

ಹೂವಾದ ಆಸೆಯೆಲ್ಲ
ಮುಳ್ಳಾಗಿ ಹೋಯಿತಲ್ಲ
ಜೀವ ನೋವ ತಾಳದಲ್ಲ
ಸುಖ ಶಾಂತಿ ಇನ್ನಿಲ್ಲ
ನೆಮ್ಮದಿಯ ಕಾಣೆನು
ನಾ ಸೋತೆನು

ಆಕಾಶ ದೀಪವು ನೀನು...

Wednesday, March 3, 2010

ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ

ಚಿತ್ರ: ವಿಜಯವಾಣಿ
ಗೀತರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ:ಎಸ್.ಜಾನಕಿ ಮತ್ತು ವಾಣಿ ಜಯರಾಮ್


ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ಒಲವಿನಾ ಲೋಕಕೇ ನೀ ತಂದೇ ಪೌರ್ಣಿಮಾ

ನಾ ಪ್ರೇಮದರಮನೆಯಲ್ಲೀ ವೈಭೋಗ ಸಿರಿಯನು ಕಂಡೇ
ನನ್ನೆದೆಯ ಸಿಂಹಾಸನದೀ ನೀ ರಾಜ್ಯವಾಳಿದೇ
ನೀ ನನ್ನ ಬಾಳಿನ ಪುಟದೇ ಅನುರಾಗ ಕವಿತೆಯ ಬರೆದೇ
ನಾನಾಗ ಭಾವದ ಹೊಳೆಯಾ ಅಲೆಯಲ್ಲಿ ತೇಲಿದೇ
ಅಲೆಯಲ್ಲಿ ತೇಲಿ ತೇಲಿದೇ

ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ...

ರಸಪೂರ್ಣ ಮೈತ್ರಿಯ ಸಮಯಾ ನೂರಾಸೆ ಕಡಲಿದು ಹೃದಯಾ
ನೀ ನಡೆಸು ಅಂಬಿಗನಾಗಿ ಒಲವೆಂಬ ನೌಕೆಯಾ
ಬಂಗಾರ ತೇರನು ಏರೀ ನಾ ನಿನ್ನ ಸಂಗದಿ ಬೆರೆವೆ
ಸುಖವೆಂಬ ಉಯ್ಯಾಲೆಯಲೀ ಸಖ ನಿನ್ನಾ ತೂಗುವೇ
ಹಾಯಾಗಿ ತೂಗಿ ಕೂಗುವೇ

ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ...

Monday, March 1, 2010

ತಾರೆಯು ಬಾನಿಗೆ ತಾವರೆ ನೀರಿಗೆ...

ಚಿತ್ರ: ಬಿಳಿಗಿರಿಯ ಬನದಲ್ಲಿ
ಗೀತರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ, ಎಸ್.ಜಾನಕಿ




ತಾರೆಯು ಬಾನಿಗೆ ತಾವರೆ ನೀರಿಗೆ
ಹೂವೆಲ್ಲ ವನದೇವಿ ಮುಡಿಗೆ
ನೀ ನನ್ನ ಬಾಳಿಗೆ
ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ, ಕಣ್ಣಲ್ಲಿ, ಮನದಲ್ಲಿ

ತಾರೆಯು ಬಾನಿಗೆ ತಾವರೆ ನೀರಿಗೆ...

ಸೂರ್ಯ ಬಾನಲಿ ಬೆಳಕು ಭೂಮಿಯಲ್ಲಿ
ಹೂಗಳು ಲತೆಯಲಿ ನೀನೆಂದು ನನ್ನಲಿ
ಮೋಡ ಬಾನಲಿ ಮಳೆಯು ಭೂಮಿಯಲ್ಲಿ
ದುಂಬಿಯು ಹೂವಲಿ ನಾನೆಂದು ನಿನ್ನಲಿ, ನಾನೆಂದೂ ನಿನ್ನಲಿ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ಹೂದಂಡೆ ಈ ಹೆಣ್ಣ ಮುಡಿಗೆ
ನೀ ನನ್ನ ಬಾಳಿಗೆ
ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ, ಕಣ್ಣಲ್ಲಿ, ಮನದಲ್ಲಿ

ತಾರೆಯು ಬಾನಿಗೆ ತಾವರೆ ನೀರಿಗೆ...

ನಿನ್ನಾ ಕಾಣದಾ ದಿನವೂ ವರುಷದಂತೆ
ನಿನ್ನನು ಸೇರಲು ಯುಗವೊಂದು ನಿಮಿಷದಂತೆ
ನಿನ್ನಾ ನೋಡಲು ಬಯಕೆ ಹೃದಯದಲ್ಲಿ
ನಾಚುತ ಕರಗಿದೆ ನನ್ನಾಸೆ ನಿನ್ನಲಿ, ನನ್ನಾಸೆ ನಿನ್ನಲಿ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ಹೂದಂಡೆ ಈ ಹೆಣ್ಣ ಮುಡಿಗೆ
ನೀ ನನ್ನ ಬಾಳಿಗೆ
ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ, ಕಣ್ಣಲ್ಲಿ, ಮನದಲ್ಲಿ

ತಾರೆಯು ಬಾನಿಗೆ ತಾವರೆ ನೀರಿಗೆ...

Thursday, November 19, 2009

ಇದು ರಾಮ ಮಂದಿರ

ಚಿತ್ರ: ರವಿಚಂದ್ರ
ಗೀತರಚನೆ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್



ಇದು ರಾಮ ಮಂದಿರ
ನೀ ರಾಮ ಚಂದಿರ
ಜೊತೆಯಾಗಿ ನೀ ಇರಲು ಬಾಳ ಸಹಜ ಸುಂದರ

ಇದು ರಾಮ ಮಂದಿರ...

ಸ್ವಾಮಿ ನಿನ್ನ ಕಣ್‌ಗಳಲಿ,
ಚಂದ್ರೋದಯ ಕಾಣುವೆ
ಸ್ವಾಮಿ ನಿನ್ನ ನಗುವಲಿ,
ಅರುಣೋದಯ ನೋಡುವೆ
ಸರಸದಲ್ಲಿ ಚತುರ ಚತುರ,
ನಿನ್ನ ಸ್ನೇಹ ಅಮರ
ನಿನ್ನ ಬಾಳ ಕಮಲದಲಿ,
ನಾನು ನಲಿವ ಭ್ರಮರ

ಇದು ರಾಮ ಮಂದಿರ...

ನನ್ನ ಸೀತೆ ಇರುವ ತಾಣ,
ಕ್ಷೀರ ಸಾಗರದಂತೆ
ನನ್ನ ಸೀತೆ ಬೆರೆತ ಮನವು,
ಹೊನ್ನ ಹೂವಿನಂತೆ
ನುಡಿವ ಮಾತು ಮಧುರ ಮಧುರ,
ನುಡಿವ ಮಾತು ಮಧುರ ಮಧುರ
ನಿನ್ನ ಪ್ರೇಮ ಅಮರ
ನೀನು ಹೃದಯ ತುಂಬಿರಲು,
ಬಾಳು ಪ್ರೇಮ ಮಂದಿರ

ಇದು ರಾಮ ಮಂದಿರ, ಆನಂದ ಸಾಗರ
ಜೊತೆಯಾಗಿ ನೀ ಇರಲು, ಬಾಳು ಸಹಜ ಸುಂದರ

Thursday, October 23, 2008

ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ

ಚಿತ್ರ: ದೇವರಗುಡಿ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ


ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ
ಸುಖಸಂಸಾರಕೆ ಎಂದೂ ಸತಿಯೇ ಕಾರಣ

ಬಾನಿಗೆ ಎಂದೆಂದಿಗೂ ಆ ರವಿಯೇ ಭೂಷಣ
ಬಳುಕುವಾ ಲತೆಗೆ ಹೆಣ್ಣಿನಾ ಮುಡಿಗೆ ಹೂವೇ ಭೂಷಣ
ರಜನಿಗೆ ಎಂದೆಂದಿಗೂ ಆ ಶಶಿಯೇ ಭೂಷಣ
ಅರಳಿದಾ ಮನಕೆ ಹವಳದಾ ತುಟಿಗೆ ನಗುವೇ ಭೂಷಣ
ನೋವಿಗೇ ...ನಲಿವಿಗೇ....ಹೆಣ್ಣೇ ಕಾರಣ....

ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ...

ಮದುವೆಯು ಅನುಬಂಧವು ಎಂದೂ ಅಳಿಯದು
ಕೋಪದಾ ಕಿಡಿಗೆ ರೋಷದಾ ಉರಿಗೆ ಒಲವೂ ಬಾಡದೂ
ದೇಹವು ದೂರಾದರೂ ಮನಸೂ ಮರೆಯದು
ಬೆರೆತಿಹಾ ಜೀವ ವಿರಹದಾ ನೋವ ಎಂದೂ ಸಹಿಸದೂ
ಒಲವಿನಾ...ಜೀವನಾ...ಸುಖಕೇ ಸಾಧನಾ...

ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ...

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಚಿತ್ರ:ತಿರುಗುಬಾಣ
ರಚನೆ: ಚಿ.ಉದಯಶಂಕರ್
ಸಂಗೀತ: ಸತ್ಯಂ
ಹಿನ್ನಲೆ ಗಾಯನ: ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್


ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ


ಕರುನಾಡು ಸ್ವರ್ಗದ ಸೀಮೆ
ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ
ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ
ಕವಿವಾಣಿಯ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

ಚಾಮುಂಡಿ ರಕ್ಷೆಯು ನಮಗೆ
ಗೊಮ್ಮಟೇಶ ಕಾವಲು ಇಲ್ಲಿ
ಶೃoಗೇರಿ ಶಾರದೆ ಲೀಲೆ
ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಹ್ಯಾತಿಯ ವಿಶ್ವೇಶ್ವರಯ್ಯ
ಜನಿಸಿದ ಈ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

ಎಳೇಳು ಜನ್ಮವೇ ಬರಲಿ
ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ
ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ
ಮನ ಕನ್ನಡವಾಗಿರಲಿ

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

Thursday, October 16, 2008

ನೀನಾಡದಾ ಮಾತು ಮಾತಲ್ಲ

ಚಿತ್ರ: ಕಾಮನಬಿಲ್ಲು
ರಚನೆ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಹಾಗೂ ಸುಲೋಚನಾ

ನೀನಾಡದಾ ಮಾತು ಮಾತಲ್ಲ
ನೀನಾಡದಾ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ

ನಲ್ಲೆ ನೀನು ಮುಡಿಯದ ಹೂವಲ್ಲಿ ಅಂದವಿಲ್ಲ
ಚೆಲುವೆ ನೀನು ಸವಿಯದ ಹಣ್ಣಲ್ಲಿ ಸಿಹಿಯು ಇಲ್ಲ
ನಿನ್ನಂಥ ಮಾತುಗಾರನ ಇನ್ನೆಲ್ಲೂ ನಾನು ಕಾಣೆನು
ಇನಿಯ ಸೋತೆನು

ನೀನಾಡದಾ ಮಾತು...

ನಲ್ಲ ನಿನ್ನ ಕಾಣದ ದಿನವೆಲ್ಲ ಶಾಂತಿಯಿಲ್ಲ
ಚೆಲುವ ನಿನ್ನ ಸೇರದ ಇರುಳಲ್ಲಿ ಸೌಖ್ಯವಿಲ್ಲ
ಮುದ್ದಾಗಿ ಮಾತನಾಡುತ ಮಾತಲ್ಲಿ ನಿನ್ನ ಗೆಲ್ಲುತ
ಸರಸ ತುಂಬಿದೆ

ನೀನಾಡದಾ ಮಾತು ಮಾತಲ್ಲ...

Thursday, August 7, 2008

ಶ್ರಾವಣ ಮಾಸ ಬಂದಾಗ ಆನಂದ ತಂದಾಗ

ಚಿತ್ರ: ಶ್ರಾವಣ ಬಂತು
ರಚನೆ: ಚಿ.ಉದಯಶಂಕರ್
ಸಂಗೀತ: ಎಂ.ರಂಗರಾವ್
ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್ ಮತ್ತು ವಾಣಿ ಜಯರಾಮ್


ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ

ನೀ ನನ್ನ ಜೊತೆಯಾಗಿ ಇರುವಾಗ ಹಿತವಾಗಿ
ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ
ಮಾತೆಲ್ಲ ಹಾಡಾಗಿ ಆ ಹಾಡು ಇಂಪಾಗಿ
ಯುಗವೊಂದು ದಿನವಾಗಿ ಕ್ಷಣವಾಗಿ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ

ಶ್ರಾವಣ ಮಾಸ ಬಂದಾಗ ಆನಂದ ತಂದಾಗ...

ಮುಗಿಲೆಲ್ಲ ಕಪ್ಪಾಗಿ ಮಿಂಚಿಂದ ಬೆಳಕಾಗಿ
ಗುಡುಗಿಂದ ಸದ್ದಾಗಿ ಮಳೆಬಂದು ತಂಪಾಗಿ
ಸಂತೋಷ ಹೆಚ್ಚಾಗಿ ನವಿಲೊಂದು ಹುಚ್ಚಾಗಿ
ಕುಣಿದಾಗ ಸೊಗಸಾಗಿ ನಮಗಾಗ ಚಳಿಯಾಗಿ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ

ಶ್ರಾವಣ ಮಾಸ ಬಂದಾಗ ಆನಂದ ತಂದಾಗ...

Saturday, July 19, 2008

ಒಮ್ಮೆ ನಿನ್ನನ್ನೂ ಕಣ್ತುಂಬಾ ಕಾಣುವಾಸೆ ಎಲ್ಲಿರುವೇ

ಚಿತ್ರ:ಗಾಳಿ ಮಾತು
ರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಜಾನಕಿ




ಒಮ್ಮೆ ನಿನ್ನನ್ನೂ ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇ..

ಅರಳಿರುವ ಹೂವಿನಲ್ಲೀ ನಿನ್ನ ನೋಟವಾ
ಹರಿಯುತಿಹ ನೀರಿನಲ್ಲೀ ನಿನ್ನ ಓಟವಾ
ಇಂಪಾದ ಗಾನದಲ್ಲೀ ನಿನ್ನ ಮೊಗದ ಭಾವವಾ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ
ನವಿಲಾಡೊ ನಾಟ್ಯದಲ್ಲೀ ಚಂದವಾ
ತಂಪಾದ ಗಾಳಿಯಲ್ಲೀ ನೀನಾಡೋ ಆಟವಾ
ದಿನವೆಲ್ಲಾ ನಾ ಕಂಡೇ ನಾ ಕಂಡೂ ಬೆರೆಗಾದೆ...

ಒಮ್ಮೆ ನಿನ್ನನ್ನೂ..

ಮಿನುಗುತಿಹ ತಾರೆಯೆಲ್ಲಾ ನಿನ್ನ ಕಂಗಳೋ
ನಗುತಿರಲು ಭೂಮಿಗೆಲ್ಲಾ ಬೆಳದಿಂಗಳೋ
ಆ ಬೆಳ್ಳೀ ಮೋಡವೆಲ್ಲಾ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದಾ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ
ನಿನ್ನಂತೇ ಯಾರಿಲ್ಲಾ ನಿನ್ನಲ್ಲೇ ಮನಸೆಲ್ಲಾ...

ಒಮ್ಮೆ ನಿನ್ನನ್ನೂ..

Wednesday, July 2, 2008

ನನ್ನ ಹಾಡು ನನ್ನದು ನನ್ನ ರಾಗ ನನ್ನದು

ಚಿತ್ರ: ಸುಪ್ರಭಾತ
ರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ




ನನ್ನ ಹಾಡು ನನ್ನದು ನನ್ನ ರಾಗ ನನ್ನದು
ನನ್ನ ತಾಳ ನನ್ನದು ನನ್ನ ಆಸೆ ನನ್ನದು

ಎಲ್ಲೆಲ್ಲಿಯು ಎಂದೆಂದಿಗು ಎಲ್ಲೆಲ್ಲಿಯು ಎಂದೆಂದಿಗು
ನನ್ನಂತೆ ನಾನು ಇರುವೆನು ನುಡಿವೆನು ನಡೆವೆನು ದುಡಿವೆನು
ಈ ಬಾಳಲಿ

ನೋಡು ನೀಲಿ ಬಾನಿಗೆ ಮೋಡ ಅಂದ ತಂದಿದೆ
ಹಕ್ಕಿ ಹಾಡಿ ಹಾರಾಡಿದೆ
ಹಾಯಾಗಿ ಆನಂದದೆ
ತಂಪು ಗಾಳಿ ಬೀಸಿದೆ ನದಿಯ ನೀರು ಓಡಿದೆ
ಹಸಿರು ಮೆತ್ತೆಯ ಹಾಸಿದೆ
ಲತೆಯಲ್ಲಿ ಹೂ ನಗುತಿದೆ
ಜಗದ ಸೊಬಗು ನನಗೆ ತಾನೆ

ನನ್ನ ಹಾಡು ನನ್ನದು ನನ್ನ ರಾಗ ನನ್ನದು...

ನೂರು ಜನರು ಬಂದರು ನೂರು ಜನರು ಹೋದರು
ನನಗೆ ನಾನೆ ಸಂಗಾತಿಯು
ನಾನೆಂದು ಸುಖ ಜೀವಿಯು
ಉರಿವ ಬಿಸಿಲೆ ಬಂದರು ಗುಡುಗು ಮಳೆಯೆ ಸುರಿದರು
ನನಗೆ ಎಲ್ಲ ಸಂತೋಷವೆ
ದಿನಕೊಂದು ಹೊಸ ನೋಟವೆ
ಹಗಲು ಇರುಳು ಸೊಗಸು ತಾನೆ

ನನ್ನ ಹಾಡು ನನ್ನದು ನನ್ನ ರಾಗ ನನ್ನದು...

Tuesday, July 1, 2008

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ

ಚಿತ್ರ : ಬೆಟ್ಟದ ಹೂವು
ರಚನೆ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಡಾ.ಪಿ.ಬಿ.ಶ್ರೀನಿವಾಸ್, ಮಾ.ಲೋಹಿತ್ ಮತ್ತು ಸಂಗಡಿಗರು



ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ

ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು
ಶಾಂತಿಯಾ ಉಳಿಸು
ಶಾಂತಿಯಾ ಉಳಿಸು

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ನಮ್ಮ ಕೋರಿಕೆ ಆಲಿಸಮ್ಮ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು
ಆಸೆ ಪೂರೈಸೂ
ಆಸೆ ಪೂರೈಸೂ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

Monday, June 23, 2008

ಈ ಭಾವಗೀತೆ ನಿನಗಾಗಿ ಹಾಡಿದೆ

ಚಿತ್ರ: ಒಂದೇ ಗುರಿ
ರಚನೆ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ

ಈ ಭಾವಗೀತೆ ನಿನಗಾಗಿ ಹಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ

ಬಳ್ಳಿಯಲಿ ಹೂವು ತುಂಬಿ ಮರಗಳಲಿ ಜೀವ ತುಂಬಿ
ಎಲ್ಲೆಲ್ಲಿ ನೊಡಿದರಲ್ಲಿ ಹೊಸ ಹಸಿರು ತುಂಬಿದೆ
ಹಾಡುತಿರೆ ದುಂಬಿಗಳೆಲ್ಲ ಹಾರುತಿರೆ ಹಕ್ಕಿಗಳೆಲ್ಲಾ
ತೋಳಿoದ ನನ್ನನು ಬಳಸಿ ನೀ ಸನಿಹ ನಿಂತಿರೇ
ನಿನ ಅಂದ ಕಂಡು ಸಂತೋಷಗೊಂಡು ಹೊಸ ಭಾವ ಮೂಡಲು

ಈ ಭಾವಗೀತೆ ನಿನಗಾಗಿ ...

ಕಣ್ಣಿನಲಿ ರೂಪ ತುಂಬಿ ಮನಸಿನಲಿ ಪ್ರೇಮ ತುಂಬಿ
ನನ್ನೆದೆಯ ವೀಣೆಯ ಮೀಟಿ ಹೊಸ ನಾದ ತುಂಬಿದೆ
ಆಸೆಗಳ ಕಣ್ಣು ತುಂಬಿ ಮೋಹವನು ತುಂಬಿ ತುಂಬಿ
ನೂರಾರು ಕನಸುಗಳನ್ನು ಬಾಳಲ್ಲಿ ತುಂಬಿದೆ
ಹೀಗೇಕೆ ನೀ ಮೌನವಾದೆ ಕಾರಣ ಹೇಳದೇ

ಈ ಭಾವಗೀತೆ ನಿನಗಾಗಿ...

Sunday, July 15, 2007

ನಿನಗಾಗಿ ಓಡೋಡಿ ಬಂದೆ

ಚಿತ್ರ: ಸನಾದಿ ಅಪ್ಪಣ್ಣ
ರಚನೆ: ಚಿ.ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್
>

ನಿನಗಾಗಿ ಓಡೋಡಿ ಬಂದೆ ನಾನು
ಕಾಣದೆ ಹೀಗೇಕೆ ಮರೆಯಾಗಿ ಹೋದೆ
ಮರೆಯಾಗಿ ಹೋದೆ ನೀನು
ನಿನಗಾಗಿ ಓಡೋಡಿ ಬಂದೆ

ತಣ್ಣನೆ ಗಾಳಿ ಬೀಸಿದ ಹಾಗೆ
ಬಾಳಲಿ ಬಂದೆ ಸಂತಸ ತಂದೆ
ಕಣ್ಣಿಗೆ ಮಿಂಚು ಕಾಣುವ ಹಾಗೆ
ಬಾಳಿನ ಬಾನಲಿ ಬೆಳಕನು ತಂದೆ
ಸ್ನೇಹದಿ ಸೇರಿ ಮೋಹವ ತೋರಿ
ಸನಿಹಕೆ ಸಾರಿ ಮನವನು ಸೇರಿ
ಏಕೆ ನೀ ಮರೆಯಾದೆ

ನಿನಗಾಗಿ ಓಡೋಡಿ ಬಂದೆ...

ಬಿಸಿಲಿಗೆ ಹೂವು ಬಾಡುವ ಹಾಗೆ
ಕಾಣದಿ ನೊಂದೆ ವಿರಹದಿ ಬೆಂದೆ
ಮುಳ್ಳಿನ ಬಲೆಯ ಇಳಿಯಂತಾಗಿ
ಅಳುಕಿದೆ ಮನವು ನಡುಗಿದೆ ತನುವು
ತೀರದ ನೋವ ತಾಳದು ಜೀವ
ಕಾಣದೆ ನೀನು ಉಳಿಯನು ನಾನು
ಏಕೆ ನೀ ದೂರಾದೆ... ದೂರಾದೆ....

ನಿನಗಾಗಿ ಓಡೋಡಿ ಬಂದೆ...

Sunday, June 10, 2007

ನಿನ್ನ ನೀನು ಮರೆತರೇನು ಸುಖವಿದೆ

ಚಿತ್ರ: ದೇವರ ಕಣ್ಣು
ಸಾಹಿತ್ಯ: ಚಿ.ಉದಯಶಂಕರ್


ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ

ಹಾಡುವುದನು ಕೋಗಿಲೆಯು ಮರೆಯುವುದೇ
ಹಾರುವುದನು ಬಾನಾಡಿ ತೊರೆಯೆವುದೆ
ಮೀನು ಈಜದಿರುವುದೆ
ದು೦ಬಿ ಹೂವ ಮರೆವುದೆ
ಮುಗಿಲ ಕ೦ಡ ನವಿಲು ನಲಿಯದೆ

ನಿನ್ನ ನೀನು ಮರೆತರೇನು...

ಗಾಳಿ ತನ್ನ ಚಲನೆಯನ್ನು ಮರೆಯುವುದೆ
ಬೆಳ್ಳಿ ಮೋಡ ತೇಲದೆ ನಿಲ್ಲುವುದೆ
ತಾರೆ ಮಿನುಗದಿರುವುದೆ
ಮಿ೦ಚು ಹೊಡೆಯದಿರುವುದೆ
ನದಿಯು ಕಡಲ ಸ್ನೇಹ ಮರೆವುದೆ

ಸಗಮಪ, ಗಮಪನಿ, ಪನಿಸ, ಪನಿರಿ,
ಗಾ ನಿ ಸಾ ನಿ ಪಾ ಮಾ ಗಾ ಮ ರಿ ,
ಗಾ ನಿ ಸಾ ನಿ ಪಾ ಮ ಗಾ ಮ ಪಾ,
ಗಾ ನಿ ಸಾ ನಿ ಪಾ ಮಾ ಗಾ ಮ

ನಿನ್ನ ನೀನು ಮರೆತರೇನು ಸುಖವಿದೆ...

ಮಾಮರವೆಲ್ಲೋ ಕೋಗಿಲೆ ಎಲ್ಲೋ...

ಚಿತ್ರ: ದೇವರಗುಡಿ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ



ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ

ಸೂರ್ಯನು ಎಲ್ಲೋ ತಾವರೆ ಎಲ್ಲೋ
ಕಾಣಲು ಕಾತರ ಕಾರಣವೇನೋ
ಚಂದಿರನೆಲ್ಲೋ ನೈದಿಲೆ ಎಲ್ಲೋ
ನೋಡಲು ಅರಳುವ ಸಡಗರವೇನೋ
ಎಲ್ಲೇ ಇರಲೀ ಹೇಗೇ ಇರಲೀ
ಕಾಣುವ ಆಸೆ ಏತಕೋ ಏನೋ

ಮಾಮರವೆಲ್ಲೋ ಕೋಗಿಲೆ ಎಲ್ಲೋ...

ಹುಣ್ಣಿಮೆಯಲ್ಲಿ ತಣ್ಣನೆ ಗಾಳೀ
ಬೀಸಲು ನಿನ್ನಾ ನೆನಪಾಗುವುದು
ದಿನರಾತ್ರಿಯಲೀ ಏಕಾಂತದಲೀ
ಏಕೋ ಏನೋ ನೋವಾಗುವುದು
ಬಯಕೆಯು ತುಂಬಿ ಆಸೆಯ ತುಂಬೀ
ಎದೆಯನು ಕೊರೆದೂ ಕಾಡುವುದೇನೋ

ಮಾಮರವೆಲ್ಲೋ ಕೋಗಿಲೆ ಎಲ್ಲೋ...