Wednesday, September 23, 2009

ಕಣಕಣದೆ ಶಾರದೆ, ಕಲೆತಿಹಳು ಕಾಣದೆ

ಚಿತ್ರಃ ಆಪ್ತಮಿತ್ರ
ಗೀತರಚನೆಃ ಕವಿರಾಜ್
ಸಂಗೀತಃ ಗುರುಕಿರಣ್
ಹಿನ್ನಲೆ ಗಾಯನಃ ಮಧು ಬಾಲಕೃಷ್ಣ



ಕಣಕಣದೆ ಶಾರದೆ, ಕಲೆತಿಹಳು ಕಾಣದೆ
ವನವನದಲ್ಲೂ ಕುಹುಕುಹು ಗಾನ
ಝರಿಝರಿಯಲ್ಲೂ ಜುಳುಜುಳು ಧ್ಯಾನ
ವಿಧವಿಧದಾ ನಾದ ಅವಳು ನುಡಿಸುತಿಹಳು

ಜನನಕು ಹಾಡು ಮರಣಕು ಹಾಡು ಯಾರೀ ಛಲಮಗಳು
ಪ್ರತಿ ಎದೆಯಾಳದಲು ಲಯ ತಾಳ ಗೀತೆ ಬದುಕಿನಲು
ಕೊರಳಿನಲಿ ಕೊಳಲಿನಲಿ ಚೆಲುವಿನಲಿ ಒಲವಿನಲಿ
ಒಲಿದು ಉಲಿದು ನಲಿದುಹರಿದು ಬರುವುದು ಶೃತಿಲಯವು

ಕಣಕಣದೆ ಶಾರದೆ, ಕಲೆತಿಹಳು ಕಾಣದೆ...

ಕುಲ ನೆಲದಾಚೆ ಅರಿಯುವ ಭಾಷೆ ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರೆಲ್ಲ ಸಪ್ತ ಸ್ವರಗಳಿಗೆ
ನಿಪಮಪನಿ ಸನಿಪನಿಸ ಗಸನಿಸಗ
ಮಪಮಪಗ ನಿಮಪಮ ಸನಿಪನಿ ಗಸನಿಸ

ಕಣಕಣದೆ ಶಾರದೆ, ಕಲೆತಿಹಳು ಕಾಣದೆ...

Wednesday, September 9, 2009

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ

ಚಿತ್ರಃ ಪಡುವಾರ ಹಳ್ಳಿ ಪಾಂಡವರು
ಸಂಗೀತಃ ವಿಜಯಭಾಸ್ಕರ



ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು
ನನ್ನಜ್ಜ ನಿನ್ನಜ್ಜ ಮುತ್ತಜ್ಜ

ಅಕ್ಷರದ ಸಕ್ಕರೆಯ ಕಹಿಯೆ೦ದು ತಿಳಿದು
ಪುಸ್ತಕವ ಕಸಕಿ೦ತ ಕಡೆಗಣಿಸಿ ಎಸೆದು
ಹಸ್ತವನು ತಲೆಗಿಟ್ಟು ಹಣೆ ಬರಹವೆ೦ದು
ತೂಕಡಿಸಿ ತೂಕಡಿಸಿ ಬಿದ್ದರು
ನಿನ್ನಜ್ಜ ನನ್ನಜ್ಜ ಮುತ್ತಜ್ಜ

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ...

ಹಾಕಿಟ್ಟು ಹುಯಿಗ೦ಜಿ ತು೦ಡು ಕ೦ಬಳಿಗೆ
ತಾವಿಟ್ಟರೊ ಕೊರಳ ಜೀತದ ಕತ್ತರಿಗೆ
ದಿಕ್ಕೆಟ್ಟರೊ ನರಳಿ ಜೀವಶವದ೦ತೆ
ತೂಕಡಿಸಿ ತೂಕಡಿಸಿ ಬಿದ್ದರು
ನಿನ್ನಜ್ಜ ನನ್ನಜ್ಜ ಮುತ್ತಜ್ಜ

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ...

ಬದುಕನ್ನು ಎದುರಿಸಲು ಕಣ್ತೆರೆದು ನೋಡ
ಬೆದರಿಕೆಗೆ ಕೈಕಟ್ಟಿ ಹಾಳಾಗಬೇಡ
ಕೊಚ್ಚೆಯ ಹುಳುವ೦ತೆ ಕುರುಡಾಗಬೇಡ
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ

Wednesday, February 4, 2009

ಶಿವಪ್ಪ ಕಾಯೋ ತಂದೆ...

ಚಿತ್ರ: ಬೇಡರ ಕಣ್ಣಪ್ಪ
ರಚನೆ: ಎಸ್. ನಂಜಪ್ಪ
ಸಂಗೀತ: ಆರ್. ಸುದರ್ಶನಂ
ಹಿನ್ನಲೆ ಗಾಯಕರು : ಶ್ರೀ ಸಿ ಎಸ್ ಜಯರಾಮನ್



ಶರಣು ಶಂಕರ ಶಂಭೋ
ಓಂಕಾರನಾದ ರೂಪಾ
ಮೊರೆಯ ನೀ ಆಲಿಸೀ
ಪಾಲಿಸೋ ಸರ್ವೇಶಾ

ಶಿವಪ್ಪ ಕಾಯೋ ತಂದೆ
ಮೂರುಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ
ಕಾಪಾಡೆಯ ಹರನೇ ಕಾಪಾಡೆಯಾ

ಭಕ್ತಿಯಂತೆ ಪೂಜೆಯಂತೆ
ಒಂದೂ ಅರಿಯೆ ನಾ
ಪಾಪವಂತೆ ಪುಣ್ಯವಂತೆ
ಕಾಣೆನಯ್ಯ ನಾ.. ಹರನೇ

ಶಿವಪ್ಪ ಕಾಯೋ ತಂದೆ...


ಶುದ್ಧನಾಗಿ ಪೂಜೆಗೈವೆ
ಒಲಿವೆಯಂತೆ ನೀ
ಶುದ್ಧವೋ ಅಶುದ್ಧವೋ
ನಾ ಕಾಣೆ ದೇವನೇ

ಶಿವಪ್ಪ ಕಾಯೋ ತಂದೆ...

ನಾದವಂತೆ ವೇದವಂತೆ
ಒಂದು ತಿಳಿಯೇ ನಾ
ಬೆಂದ ಜೀವ ನೊಂದು
ಕೂಗೆ ಬಂದು ನೋಡೆಯಾ ಹರನೇ

ಶಿವಪ್ಪ ಕಾಯೋ ತಂದೆ...

ಏಕಚಿತ್ತದಿ ನಂಬಿದವರ
ನೀ ಸಾಕಿ ಸಲಹುವೆ ಎಂತಪ್ಪಾ
ಶೋಕವ ಹರಿಸುವ
ದೇವ ನೀನಾದರೆ
ಬೇಟೆಯ ತೋರೋ ಎನ್ನಪ್ಪಾ
ಲೋಕವನಾಳುವ ನೀನಪ್ಪಾ

ಶಿವಪ್ಪ ಕಾಯೋ ತಂದೆ...

Friday, January 16, 2009

ನಗು ಎಂದಿದೆ ಮಂಜಿನ ಬಿಂದು

ಚಿತ್ರ: ಪಲ್ಲವಿ ಅನುಪಲ್ಲವಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಇಳಯ ರಾಜ
ಹಿನ್ನಲೆ ಗಾಯಕರು: ಎಸ್.ಜಾನಕಿ


ನಗು ಎಂದಿದೆ ಮಂಜಿನ ಬಿಂದು
ನಲಿ ಎಂದಿದೆ ಗಾಳಿ ಇಂದು

ಚಿಲಿಪಿಲಿ ಎಂದು ಹಕ್ಕಿಯು ಹೇಳಿದೆ ಈಗ ಬಾ... ಬಾ
ಜೊತೆಯಲಿ ಕೂಡಿ ನಮ್ಮಂತೆ ಹಾರು ನೀ ಬೇಗ.. ಬಾ... ಬಾ...
ಹಾರಲು ಆಗದೆ ಸೋತಿರಲು
ಬಾಳಿಗೆ ಗೆಳೆಯನು ಬೇಕಿರಲು
ಬಯಸಿದೆ ಅರಸಿದೆ ನಾ
ಕಂಡೇ... ಈಗಲೆ ನಾ
ನನ್ನ ಸ್ನೇಹಿತನಾ
ಇದೇ ನಗುವ ಮನದ ಸ್ಪಂದ
ಸವಿ ಮಧುರ... ಮಮತೆ ಬಂಧ...

ನಗು ಎಂದಿದೆ ಮಂಜಿನ ಬಿಂದು...

ಹಾಡುವ ಬಾ ಬಾ.. ನದಿ ಅಲೆ ಕೊಡುವುದು ರಾಗ... ಈಗ
ಕುಣಿಯುವ ಬಾ ಬಾ ಮಳೆಯ ಹನಿ ತರುವುದು ತಾಳ ಮೇಳ
ಪ್ರಕೃತಿಯು ಬರೆದ ಕವನವಿದು...
ಮಮತೆಯ ಸೊಗಸಿನಾ ಪಲ್ಲವಿಯು
ಸುಂದರ ಸ್ನೇಹವಿದು..
ಇಂಥ ಅನುಬಂಧ
ಎಂಥ ಆನಂದ
ಇದೇ ನಗುವ ಮನದ ಸ್ಪಂದ
ಸವಿ ಮಧುರ... ಮಮತೆ ಬಂಧ

ನಗು ಎಂದಿದೆ ಮಂಜಿನ ಬಿಂದು...

Thursday, October 23, 2008

ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ

ಚಿತ್ರ: ದೇವರಗುಡಿ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯನ: ಎಸ್.ಪಿ


ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ
ಸುಖಸಂಸಾರಕೆ ಎಂದೂ ಸತಿಯೇ ಕಾರಣ

ಬಾನಿಗೆ ಎಂದೆಂದಿಗೂ ಆ ರವಿಯೇ ಭೂಷಣ
ಬಳುಕುವಾ ಲತೆಗೆ ಹೆಣ್ಣಿನಾ ಮುಡಿಗೆ ಹೂವೇ ಭೂಷಣ
ರಜನಿಗೆ ಎಂದೆಂದಿಗೂ ಆ ಶಶಿಯೇ ಭೂಷಣ
ಅರಳಿದಾ ಮನಕೆ ಹವಳದಾ ತುಟಿಗೆ ನಗುವೇ ಭೂಷಣ
ನೋವಿಗೇ ...ನಲಿವಿಗೇ....ಹೆಣ್ಣೇ ಕಾರಣ....

ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ...

ಮದುವೆಯು ಅನುಬಂಧವು ಎಂದೂ ಅಳಿಯದು
ಕೋಪದಾ ಕಿಡಿಗೆ ರೋಷದಾ ಉರಿಗೆ ಒಲವೂ ಬಾಡದೂ
ದೇಹವು ದೂರಾದರೂ ಮನಸೂ ಮರೆಯದು
ಬೆರೆತಿಹಾ ಜೀವ ವಿರಹದಾ ನೋವ ಎಂದೂ ಸಹಿಸದೂ
ಒಲವಿನಾ...ಜೀವನಾ...ಸುಖಕೇ ಸಾಧನಾ...

ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ...

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಚಿತ್ರ:ತಿರುಗುಬಾಣ
ರಚನೆ: ಚಿ.ಉದಯಶಂಕರ್
ಸಂಗೀತ: ಸತ್ಯಂ
ಹಿನ್ನಲೆ ಗಾಯನ: ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್


ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ


ಕರುನಾಡು ಸ್ವರ್ಗದ ಸೀಮೆ
ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ
ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ
ಕವಿವಾಣಿಯ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

ಚಾಮುಂಡಿ ರಕ್ಷೆಯು ನಮಗೆ
ಗೊಮ್ಮಟೇಶ ಕಾವಲು ಇಲ್ಲಿ
ಶೃoಗೇರಿ ಶಾರದೆ ಲೀಲೆ
ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಹ್ಯಾತಿಯ ವಿಶ್ವೇಶ್ವರಯ್ಯ
ಜನಿಸಿದ ಈ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

ಎಳೇಳು ಜನ್ಮವೇ ಬರಲಿ
ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ
ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ
ಮನ ಕನ್ನಡವಾಗಿರಲಿ

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ...

Thursday, October 16, 2008

ನೀನಾಡದಾ ಮಾತು ಮಾತಲ್ಲ

ಚಿತ್ರ: ಕಾಮನಬಿಲ್ಲು
ರಚನೆ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಹಾಗೂ ಸುಲೋಚನಾ

ನೀನಾಡದಾ ಮಾತು ಮಾತಲ್ಲ
ನೀನಾಡದಾ ಹಾಡು ಹಾಡಲ್ಲ
ನೀನಿಲ್ಲದಾ ಮನೆ ಮನೆಯಲ್ಲ
ನೀನಿಲ್ಲದೇ ನನಗೆ ಬಾಳಿಲ್ಲ

ನಲ್ಲೆ ನೀನು ಮುಡಿಯದ ಹೂವಲ್ಲಿ ಅಂದವಿಲ್ಲ
ಚೆಲುವೆ ನೀನು ಸವಿಯದ ಹಣ್ಣಲ್ಲಿ ಸಿಹಿಯು ಇಲ್ಲ
ನಿನ್ನಂಥ ಮಾತುಗಾರನ ಇನ್ನೆಲ್ಲೂ ನಾನು ಕಾಣೆನು
ಇನಿಯ ಸೋತೆನು

ನೀನಾಡದಾ ಮಾತು...

ನಲ್ಲ ನಿನ್ನ ಕಾಣದ ದಿನವೆಲ್ಲ ಶಾಂತಿಯಿಲ್ಲ
ಚೆಲುವ ನಿನ್ನ ಸೇರದ ಇರುಳಲ್ಲಿ ಸೌಖ್ಯವಿಲ್ಲ
ಮುದ್ದಾಗಿ ಮಾತನಾಡುತ ಮಾತಲ್ಲಿ ನಿನ್ನ ಗೆಲ್ಲುತ
ಸರಸ ತುಂಬಿದೆ

ನೀನಾಡದಾ ಮಾತು ಮಾತಲ್ಲ...